ಟಿಆರ್ ಪಿ ಹಗರಣ | ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ಜಾಮೀನು ಅರ್ಜಿ ತಿರಸ್ಕೃತ

Prasthutha|

ಮುಂಬೈ : ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ಅವರ ಜಾಮೀನು ಅರ್ಜಿಯನ್ನು ಮುಂಬೈಯ ಸೆಶನ್ಸ್ ನ್ಯಾಯಾಲಯವೊಂದು ತಿರಸ್ಕರಿಸಿದೆ.

- Advertisement -

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಜೊತೆಗೆ ನಡೆಸಿದ್ದ ವಾಟ್ಸಪ್ ಚಾಟ್ ಗಳು ಸೋರಿಕೆಯಾದ ಬೆನ್ನಲ್ಲೇ, ಬಂಧನದಲ್ಲಿದ್ದ ದಾಸ್ ಗುಪ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಾಸ್ ಗುಪ್ತಾ ಆರೋಗ್ಯವಾಗಿದ್ದಾರೆ, ಆದರೆ ಮುಂಬೈಯ ಜೆಜೆ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಮುಂದುವರಿಯಲಿದೆ ಎಂದು ವರದಿಗಳು ತಿಳಿಸಿವೆ.

- Advertisement -

ದಾಸ್ ಗುಪ್ತಾ ಮತ್ತು ಅರ್ನಾಬ್ ಗೋಸ್ವಾಮಿ ನಡುವಿನ ವಾಟ್ಸಪ್ ಚಾಟ್ ನಲ್ಲಿ ಸೋರಿಕೆಯಾಗಿರುವ ಮಾಹಿತಿಗಳು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದೆ.

ಟಿವಿ ಕಾರ್ಯಕ್ರಮಗಳನ್ನು ದೇಶಭಕ್ತಿಯ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಗೋಸ್ವಾಮಿ, 40 ಮಂದಿ ಯೋಧರನ್ನು ಬಲಿ ಪಡೆದ ಪುಲ್ವಾಮ ಭಯೋತ್ಪಾದಕ ದಾಳಿಗೆ ಸಂಭ್ರಮಿಸಿದ್ದ ಬಗ್ಗೆ ಈ ವಾಟ್ಸಪ್ ಚಾಟ್ ನಲ್ಲಿ ಬಹಿರಂಗ ಗೊಂಡಿದೆ. ಅಲ್ಲದೆ, ಬಾಲಾಕೋಟ್ ಕಾರ್ಯಾಚರಣೆಗೆ ಮೂರು ದಿನ ಮುಂಚಿತವಾಗಿಯೇ ಗೋಸ್ವಾಮಿಗೆ ಮಾಹಿತಿಯಿತ್ತು ಎನ್ನಲಾಗುತ್ತಿದೆ.  

Join Whatsapp