ವಿಶ್ವ ತಂಬಾಕು ರಹಿತ ದಿನ: ಮೇ 31ರಿಂದ ಜೂನ್ 30ರವರೆಗೆ ಕಾಯರ್ ಕೇರ್ ಕ್ಲಿನಿಕ್ ನಲ್ಲಿ ತಂಬಾಕು ವರ್ಜನೆ ಶಿಬಿರ

Prasthutha|

ಮಂಗಳೂರು: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಮುಡಿಪು ಹಾಗೂ ದೇರಳಕಟ್ಟೆಯ ಕಾಯರ್ ಕೇರ್ ಕ್ಲಿನಿಕ್ ನಲ್ಲಿ ತಂಬಾಕು, ಮದ್ಯಪಾನ, ಪಾನ್ ಮಸಾಲ ವರ್ಜನೆ ಶಿಬಿರವನ್ನು ಮೇ 31ರಿಂದ ಜೂನ್ 30ರವರೆಗೆ ಆಯೋಜಿಸಲಾಗಿದೆ.

- Advertisement -


ಶಿಬಿರದಲ್ಲಿ ಕಾಯರ್ ಕೇರ್ ಕ್ಲಿನಿಕ್ ನ ಖ್ಯಾತ ನರ ಮಾನಸಿಕ ತಜ್ಞ ಡಾ.ಬಾಲಸುಬ್ರಹ್ಮಣ್ಯ ಭಟ್ ಹಾಗೂ ಡಾ.ಪಿಎಂಎ ನಿಶಾದ್ ಭಾಗವಹಿಸಲಿದ್ದಾರೆ. ಆದ್ದರಿಂದ ಲಹರಿ ಪದಾರ್ಥಗಳಿಂದ ಹೊರಬರಲು ಹರಸಾಹಸಪಡುವವರು ಇದರ ಉಪಯೋಗ ಪಡೆಯಬಹುದು. ಅಲ್ಲದೆ ರಕ್ತ ಪರೀಕ್ಷೆ, ಇಸಿಜಿ ಇನ್ನಿತರ ಪರೀಕ್ಷೆಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು. ಹೆಸರು ನೋಂದಾಯಿಸಲು ಮೊ.ಸಂ.: 9035042020 ಅಥವಾ 903508 2020ಅನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Join Whatsapp