Home ಟಾಪ್ ಸುದ್ದಿಗಳು ಕಾಫಿನಾಡಿನಲ್ಲಿ ಮುಂದುವರಿದ ಹುಲಿ ದಾಳಿ

ಕಾಫಿನಾಡಿನಲ್ಲಿ ಮುಂದುವರಿದ ಹುಲಿ ದಾಳಿ

ಚಿಕ್ಕಮಗಳೂರು: ಹುಲಿ ದಾಳಿಗೆ ಜಾನುವಾರು ಬಲಿಯಾದ ಘಟನೆ ಮೂಡಿಗೆರೆ ತಾಲೂಕಿನ ಬಾನಳ್ಳಿಯಲ್ಲಿ ನಡೆದಿದೆ.

ಬಾನಳ್ಳಿ ಗ್ರಾಮದ ಸುಂದರೇಶ್ ಎಂಬವರಿಗೆ ಸೇರಿದ ಜಾನುವಾರಿನ ಮೇಲೆ ಇಂದು ಮುಂಜಾನೆ ಹುಲಿ ದಾಳಿ ಮಾಡಿದೆ.

ಹುಲಿಯು ದಿನಕ್ಕೊಂದು ಜಾನುವಾರನ್ನು ಬಲಿ ಪಡೆಯುತ್ತಿದ್ದು, ಬಾನಳ್ಳಿ, ಮತ್ತಿಕಟ್ಟೆ, ಹೊಸಳ್ಳಿ, ಭಾರತಿಬೈಲು ಸುತ್ತಮುತ್ತ ಹುಲಿ ಸಂಚಾರ ಹೆಚ್ಚಾಗಿದೆ. ಜನಸಾಮಾನ್ಯರು ಹೊರಗಡೆ ಓಡಾಡಲು ಭಯಪಡುತ್ತಿದ್ದು, ಹುಲಿ ಹಿಡಿಯುವಂತೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version