Home ಟಾಪ್ ಸುದ್ದಿಗಳು ಮೇಲ್ಮನೆಗೆ ಚುನಾವಣೆ: ಗೋ ಮಧುಸೂಧನ್ ಗಿಲ್ಲ ಟಿಕೆಟ್ !

ಮೇಲ್ಮನೆಗೆ ಚುನಾವಣೆ: ಗೋ ಮಧುಸೂಧನ್ ಗಿಲ್ಲ ಟಿಕೆಟ್ !

► ಜೆಡಿಎಸ್ ನ ಬಸವರಾಜ ಹೊರಟ್ಟಿಗೆ ಬಿಜೆಪಿ ಮಣೆ ?

ಬೆಂಗಳೂರು: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್ಸಿ ಗೋ. ಮಧುಸೂಧನ್ ಗೆ ಟಿಕೆಟ್ ಕೈತಪ್ಪಿದೆ. ನಾಲ್ಕು ಕ್ಷೇತ್ರಗಳ ಪೈಕಿ 3ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿಯು ಘೋಷಣೆ ಮಾಡಿದ್ದು, ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯನ್ನು ಕಾಯ್ದಿರಿಸಿದೆ.

ಮಾಜಿ ಎಂಎಲ್ಸಿ ಗೋ ಮಧುಸೂಧನ್ ಗೆ ತಪ್ಪಿರುವ ಟಿಕೆಟ್ ಸಭಾಪತಿ ಬಸವರಾಜ ಹೊರಟ್ಟಿ ಪಾಲಾಗಲಿದೆ ಎನ್ನಲಾಗಿದ್ದು, ಹೊರಟ್ಟಿ ಬಿಜೆಪಿ ಸೇರ್ಪಡೆ ಅಥವಾ ಬೆಂಬಲ ವಿಚಾರ ಇನ್ನೂ ಅಂತಿಮವಾಗದ ಹಿನ್ನೆಲೆಯಲ್ಲಿ ಅಭ್ಯರ್ಥಿ ಘೋಷನೆಯನ್ನು ಬಿಜೆಪಿಯು ಕಾಯ್ದಿರಿಸಿದೆ ಎನ್ನಲಾಗಿದೆ.

Join Whatsapp
Exit mobile version