Home ಟಾಪ್ ಸುದ್ದಿಗಳು ರಸ್ತೆ ಅಪಘಾತ: ಕುಂದಾಪುರದ ಒಂದೇ ಕುಟುಂಬದ ಮೂವರು ಸಾವು

ರಸ್ತೆ ಅಪಘಾತ: ಕುಂದಾಪುರದ ಒಂದೇ ಕುಟುಂಬದ ಮೂವರು ಸಾವು

ಚಿತ್ರದುರ್ಗ: ಇಲ್ಲಿನ ಶ್ರೀರಂಗಾಪುರ ಬಳಿ ರಸ್ತೆ ಅಪಘಾತ ಸಂಭವಿಸಿ ಕುಂದಾಪುರದ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ  ನಡೆದಿದೆ.

ಗೀತಾ (32), ಶಾರದಾ (60), ದೃತಿ (5) ಮೃತಪಟ್ಟವರೆಂದು ಗುರುತಿಸಲಾಗಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ..

ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version