Home ಕರಾವಳಿ ಪುತ್ತೂರು | ಚರಣ್ ಕೊಲೆ ಪ್ರಕರಣ: ಮೂವರು ವಶಕ್ಕೆ, ಕಿಶೋರ್ ಗಾಗಿ ಶೋಧ

ಪುತ್ತೂರು | ಚರಣ್ ಕೊಲೆ ಪ್ರಕರಣ: ಮೂವರು ವಶಕ್ಕೆ, ಕಿಶೋರ್ ಗಾಗಿ ಶೋಧ

ಪುತ್ತೂರು: ಸಂಘಪರಿವಾರದ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ರಾಜ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನರ್ಮೇಶ್ ರೈ(29), ನಿತಿಲ್ ಶೆಟ್ಟಿ(23), ವಿಜೇಶ್ (22) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ಇದೊಂದು ಪೂರ್ವ ದ್ವೇಷದ ಕಾರಣದಿಂದ ಹತ್ಯೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ ಐ ಉದಯ ರವಿ, ಬೆಳ್ಳಾರೆ ಠಾಣಾ ಪಿಎಸ್ ಐ ರುಕ್ಮ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Join Whatsapp
Exit mobile version