Home ಟಾಪ್ ಸುದ್ದಿಗಳು ರಾಜಸ್ಥಾನ: ಸಂಘಪರಿವಾರದಿಂದ ಅಜ್ಮೀರ ದರ್ಗಾ ಮುಂಭಾಗ ರ‍್ಯಾಲಿ, ಪ್ರಚೋದನಾಕಾರಿ ಘೋಷಣೆ

ರಾಜಸ್ಥಾನ: ಸಂಘಪರಿವಾರದಿಂದ ಅಜ್ಮೀರ ದರ್ಗಾ ಮುಂಭಾಗ ರ‍್ಯಾಲಿ, ಪ್ರಚೋದನಾಕಾರಿ ಘೋಷಣೆ

ಅಜ್ಮೀರ್: ಇತಿಹಾಸ ಪ್ರಸಿದ್ಧ ಅಜ್ಮೀರ್ ಖ್ವಾಜಾ ಮುಹಿಯುದ್ದೀನ್ ಚಿಸ್ತಿ ದರ್ಗಾ ಮುಂಭಾಗದಲ್ಲಿ ಸಂಘಪರಿವಾರ ಕಾರ್ಯಕರ್ತರು ಬೈಕ್ ರ‍್ಯಾಲಿಯ ಮೂಲಕ ಪ್ರಚೋದನಾಕಾರಿ ಘೋಷನೆಯನ್ನು ಕೂಗಿ ಸ್ಥಳದಲ್ಲಿ ಸಂಘರ್ಷದ ಪರಿಸ್ಥಿತಿ ನಿರ್ಮಿಸಿರುವ ಘಟನೆ ರಾಜಸ್ಥಾನದ ಅಜ್ಮೀರ್ ನಿಂದ ವರದಿಯಾಗಿದೆ.

ರಾಜಸ್ಥಾನ ಅಸೆಂಬ್ಲಿ ಚುನಾವಣೆಗೆ ಕೇವಲ 18 ತಿಂಗಳು ಬಾಕಿ ಇರುವಾಗ ಬಿಜೆಪಿ ಚುನಾವಣೆಯನ್ನು ಗೆಲ್ಲುವ ಸಲುವಾಗಿ ಸಂಘಪರಿವಾರವು ಹಿಂದೂ – ಮುಸ್ಲಿಮರ ನಡುವೆ ಗಲಭೆ ಸೃಷ್ಟಿಸುವ ಕಾರ್ಯಕ್ಕೆ ಕೈ ಹಾಕಿದೆ ಎಂದು ಹೇಳಲಾಗಿದೆ.

ಸದ್ಯ ಇತಿಹಾಸ ಪ್ರಸಿದ್ಧ ಅಜ್ಮೀರ್ ದರ್ಗಾದ ಮುಂಭಾಗದಲ್ಲಿ ಸಂಘಪರಿವಾರದ ಕಾರ್ಯಕರ್ತರು ರ‍್ಯಾಲಿ, ಪ್ರಚೋದನಾಕಾರಿ ಘೋಷಣೆ ಕೂಗುವ ಮೂಲಕ ಮುಸ್ಲಿಮರನ್ನು ಕೆರಳಿಸಲು ಮುಂದಾಗಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

Join Whatsapp
Exit mobile version