Home ಕರಾವಳಿ ಮಂಗಳೂರು: ಸಮುದ್ರಕ್ಕೆ ಇಳಿದಿದ್ದ ಯುವಕ ನೀರುಪಾಲು

ಮಂಗಳೂರು: ಸಮುದ್ರಕ್ಕೆ ಇಳಿದಿದ್ದ ಯುವಕ ನೀರುಪಾಲು

ಮಂಗಳೂರು: ಕಡಲಿಗೆ ಸ್ನಾನಕ್ಕೆಂದು ಇಳಿದಿದ್ದ ಯುವಕನೋರ್ವ ನೀರುಪಾಲಾದ ಘಟನೆ ತಣ್ಣೀರು ಬಾವಿ ಸಮುದ್ರದಲ್ಲಿ ನಡೆದಿದೆ.

ತಣ್ಣೀರುಬಾವಿ ನಿವಾಸಿ ಮುಹಮ್ಮದ್ ಕೈಫ್(19) ನೀರುಪಾಲಾದವರು ಎಂದು ಗುರುತಿಸಲಾಗಿದೆ.

ಕೈಫ್ ಶುಕ್ರವಾರ ಸಂಜೆ ವೇಳೆಗೆ ತಣ್ಣೀರುಬಾವಿ ಕಡಲಿಗೆ ಸ್ನಾನಕ್ಕೆ ಹೋಗಿದ್ದು, ಕಡಲಿನ ಅಲೆಗಳಿಗೆ ಸಿಲುಕಿ ಸಮುದ್ರಪಾಲಾಗಿದ್ದಾರೆ.

ಕೈಫ್ ಇನ್ನು ಪತ್ತೆಯಾಗದ ಕಾರಣ ಮೀನುಗಾರರು ಹಾಗೂ ಸ್ಥಳೀಯ ಈಜುಗಾರರು ಹುಡುಕಾಟದಲ್ಲಿ ತೊಡಗಿದ್ದಾರೆ.

Join Whatsapp
Exit mobile version