Home ಟಾಪ್ ಸುದ್ದಿಗಳು ದಲಿತ ಯುವಕನನ್ನು ಉಗುಳು ನೆಕ್ಕಿಸಿದ ಸವರ್ಣೀಯರು!

ದಲಿತ ಯುವಕನನ್ನು ಉಗುಳು ನೆಕ್ಕಿಸಿದ ಸವರ್ಣೀಯರು!

►ವೀಡಿಯೊ ವೀಕ್ಷಿಸಿ

ಪಾಟ್ನಾ: ಜಾತಿ ತಾರತಮ್ಯ ಮತ್ತು ಹಿಂಸಾಚಾರಕ್ಕೆ ಹೆಸರಾದ ಬಿಹಾರದಲ್ಲಿ ದಲಿತ ಯುವಕನನ್ನು ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಲಿಲ್ಲವೆಂದು ಮೇಲ್ಜಾತಿಯ ಗುಂಪೊಂದು ಉಗುಳು ನೆಕ್ಕಿಸಿದ ಘಟನೆ ನಡೆದಿದೆ. ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಬಿಹಾರದ ಗಯಾದಲ್ಲಿ ಇಂತಹಾ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ದಲಿತ ಯುವಕನಿಗೆ ಜೀವ ಬೆದರಿಕೆ ನೀಡಿ ಉಗುಳು ನೆಕ್ಕಿಸುವ ದೃಶ್ಯ ಆ ವೀಡಿಯೋದಲ್ಲಿ ಕಾಣಬಹುದು. ಬಿಹಾರದ ಗಯಾ ಜಿಲ್ಲೆಯ ವಾಸಿಗಂಜ್ ಬ್ಲಾಕ್‌ನಲ್ಲಿರುವ ಗುರಿಯಾವನ್ ಪಂಚಾಯತ್ ಮುಖ್ಯಸ್ಥ ಮತ್ತು ಆತನ ಸಹಚರರು ದಲಿತ ಯುವಕನಿಗೆ ಈ ರೀತಿ ಅಮಾನವೀಯ ಕಿರುಕುಳ ನೀಡಿದ್ದಾರೆ ಎಂದು ‘ನ್ಯೂಸ್ ಬಸ್ಟ್’ ವರದಿ ಮಾಡಿದೆ.

ವೀಡಿಯೋ ವೈರಲಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಗಯಾ ಎಸ್‌ಪಿ ಆದಿತ್ಯ ಕುಮಾರ್ ತಿಳಿಸಿದ್ದಾರೆ.

Join Whatsapp
Exit mobile version