ದಲಿತ ಯುವಕನನ್ನು ಉಗುಳು ನೆಕ್ಕಿಸಿದ ಸವರ್ಣೀಯರು!

Prasthutha|

►ವೀಡಿಯೊ ವೀಕ್ಷಿಸಿ

- Advertisement -

ಪಾಟ್ನಾ: ಜಾತಿ ತಾರತಮ್ಯ ಮತ್ತು ಹಿಂಸಾಚಾರಕ್ಕೆ ಹೆಸರಾದ ಬಿಹಾರದಲ್ಲಿ ದಲಿತ ಯುವಕನನ್ನು ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಲಿಲ್ಲವೆಂದು ಮೇಲ್ಜಾತಿಯ ಗುಂಪೊಂದು ಉಗುಳು ನೆಕ್ಕಿಸಿದ ಘಟನೆ ನಡೆದಿದೆ. ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಬಿಹಾರದ ಗಯಾದಲ್ಲಿ ಇಂತಹಾ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ದಲಿತ ಯುವಕನಿಗೆ ಜೀವ ಬೆದರಿಕೆ ನೀಡಿ ಉಗುಳು ನೆಕ್ಕಿಸುವ ದೃಶ್ಯ ಆ ವೀಡಿಯೋದಲ್ಲಿ ಕಾಣಬಹುದು. ಬಿಹಾರದ ಗಯಾ ಜಿಲ್ಲೆಯ ವಾಸಿಗಂಜ್ ಬ್ಲಾಕ್‌ನಲ್ಲಿರುವ ಗುರಿಯಾವನ್ ಪಂಚಾಯತ್ ಮುಖ್ಯಸ್ಥ ಮತ್ತು ಆತನ ಸಹಚರರು ದಲಿತ ಯುವಕನಿಗೆ ಈ ರೀತಿ ಅಮಾನವೀಯ ಕಿರುಕುಳ ನೀಡಿದ್ದಾರೆ ಎಂದು ‘ನ್ಯೂಸ್ ಬಸ್ಟ್’ ವರದಿ ಮಾಡಿದೆ.

- Advertisement -

ವೀಡಿಯೋ ವೈರಲಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಗಯಾ ಎಸ್‌ಪಿ ಆದಿತ್ಯ ಕುಮಾರ್ ತಿಳಿಸಿದ್ದಾರೆ.

Join Whatsapp