Home ಕರಾವಳಿ ಮಂಗಳೂರು | ನಗರದ ರಸ್ತೆಯ ಮಧ್ಯಭಾಗದಲ್ಲೇ ಸಂಘಪರಿವಾರದ ಕೇಸರಿಧ್ವಜ ಪ್ರತ್ಯಕ್ಷ : ಶಾಂತಿ ಕದಡುವ ಯತ್ನ

ಮಂಗಳೂರು | ನಗರದ ರಸ್ತೆಯ ಮಧ್ಯಭಾಗದಲ್ಲೇ ಸಂಘಪರಿವಾರದ ಕೇಸರಿಧ್ವಜ ಪ್ರತ್ಯಕ್ಷ : ಶಾಂತಿ ಕದಡುವ ಯತ್ನ

ಮಂಗಳೂರು: ನಗರದ ಕಂಕನಾಡಿಯ ರಸ್ತೆ ಮಧ್ಯೆ ಇರುವ ಸಣ್ಣ ವೃತ್ತವೊಂದಕ್ಕೆ ಸಂಘಪರಿವಾರದ ಕಿಡಿಗೇಡಿಗಳು ರಾತ್ರೋ ರಾತ್ರಿ ಕೇಸರಿ ಧ್ವಜವನ್ನು ಇಟ್ಟು ಶಾಂತಿ ಕದಡುವ ಪ್ರಯತ್ನ ನಡೆದಿದೆ.


ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸಂಘಪರಿವಾರದವರು ಕೇಸರಿ ಧ್ವಜವನ್ನು ಇಟ್ಟು ಸಂಘರ್ಷದ ವಾತಾವರಣ ಸೃಷ್ಟಿಸಲು ಯತ್ನ ನಡೆಯುತ್ತಿರುವುದು ಮುಂದುವರಿದಿದೆ.


ಈ ಬಗ್ಗೆ ಕಂಕನಾಡಿ ಪ್ರದೇಶದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದು, , ಕೇಸರಿ ಧ್ವಜವನ್ನು ಇಡುವ ಮೂಲಕ ಸಂಘಪರಿವಾರದವರು ಗಲಭೆಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಪೊಲೀಸರು ಹಾಗೂ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಈ ಧ್ವಜವನ್ನು ಕಿತ್ತು ಹಾಕಿ, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

Join Whatsapp
Exit mobile version