Home ಟಾಪ್ ಸುದ್ದಿಗಳು ಮಳೆಯಿಂದ ಈರುಳ್ಳಿ ಬೆಳೆ  ಸಂಪೂರ್ಣ ನಾಶ; ಮನನೊಂದು ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ

ಮಳೆಯಿಂದ ಈರುಳ್ಳಿ ಬೆಳೆ  ಸಂಪೂರ್ಣ ನಾಶ; ಮನನೊಂದು ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ

ಚಿಕ್ಕಮಗಳೂರು : ಮಳೆಯಿಂದ ಈರುಳ್ಳಿ ಬೆಳೆ  ಸಂಪೂರ್ಣ ನಾಶವಾದ ಹಿನ್ನೆಲೆಯಲ್ಲಿ ಮನನೊಂದ ರೈತರೊಬ್ಬರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ಘಟನೆ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.

ರೈತ ಮಂಜುನಾಥ್ ಸುಮಾರು 3-4 ಲಕ್ಷ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿ ಬೆಳೆ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಸಂಪೂರ್ಣ  ನಾಶವಾಗಿತ್ತು.

ಹಣ ಬೇಡ ಕಿತ್ತುಕೊಂಡು ಹೋಗಿ ಎಂದು ಹೇಳಿದರೂ ಕೀಳುವವರು ಯಾರೂ ಇಲ್ಲ. ಈರುಳ್ಳಿ ಸೈಜ್ ಬೆಳ್ಳುಳ್ಳಿಯಂತಿದ್ದು, ಕಿತ್ತರೆ ಕೂಲಿಗೂ ಆಗೋದಿಲ್ಲ ಎಂದು ಮನನೊಂದ ರೈತ ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ.

Join Whatsapp
Exit mobile version