Home ಟಾಪ್ ಸುದ್ದಿಗಳು ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಉಚ್ಛಾಟಿತಗೊಂಡ ನವೀನ್ ಜಿಂದಾಲ್ ಕುಟುಂಬಕ್ಕೆ ಜೀವ...

ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಉಚ್ಛಾಟಿತಗೊಂಡ ನವೀನ್ ಜಿಂದಾಲ್ ಕುಟುಂಬಕ್ಕೆ ಜೀವ ಬೆದರಿಕೆ

ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ  ಮತ್ತು ನಿಂದನಾತ್ಮಕ ಟೀಕೆಗಳಿಂದ ಬಿಜೆಪಿ ಪಕ್ಷದಿಂದ ಉಚ್ಛಾಟಿತರಾದ ನವೀನ್ ಜಿಂದಾಲ್ ಕುಟುಂಬಕ್ಕೆ ಜೀವ ಬೆದರಿಕೆ ನೀಡಲಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಟೀಕಿಸಿ ಸಾಕಷ್ಟು ಕಿರುಕುಳವನ್ನು ನೀಡುತ್ತಿದ್ದಾರೆಂದು ಖುದ್ದು ನವೀನ್ ಜಿಂದಾಲ್ ತಿಳಿಸಿದ್ದಾರೆ.

ನನ್ನನ್ನು ಕೂಡ ಕೊಲ್ಲುವ ಸಂಚಿದೆ, ನನಗೆ ಕಳೆದ ಹಲವು ದಿನಗಳಿಂದ ಕೊಲೆ ಬೆದರಿಕೆಗಳು ಬರುತ್ತಿವೆ . ನನ್ನ ಕುಟುಂಬ ಮತ್ತು ಮನೆಯ ಕೆಲ ವೀಡಿಯೊಗಳನ್ನು ಮನಬಂದಂತೆ ಹಂಚುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ನನಗೆ ಮತ್ತು ನನ್ನ ಕುಟುಂಬದವರ ವಿರುದ್ಧ ಅನುಚಿತವಾಗಿ ಬರೆಯುತ್ತಿದ್ದಾರೆ. ನನ್ನನ್ನು ಕೊಂದವರಿಗೆ ಬಹುಮಾನವನ್ನೂ ಘೋಷಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಂದಾಲ್ ಅವರ ಕುಟುಂಬ ದೆಹಲಿಯನ್ನು ತೊರೆದಿದ್ದಾರೆ.

Join Whatsapp
Exit mobile version