ಭಾರತಕ್ಕೆ ಬಂದಿಳಿದ ಚಾಂಪಿಯನ್ನರಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

- Advertisement -

ಮುಂಬೈ​: ಐಸಿಸಿ ಚಾಂಪಿಯನ್ಸ್​ ಟ್ರೋಫಿ ಜಯಿಸಿರುವ ಭಾರತ ಕ್ರಿಕೆಟ್​ ತಂಡದ ಆಟಗಾರರು ದುಬೈನಿಂದ ಭಾರತಕ್ಕೆ ವಾಪಸ್ಸಾದರು. ವಿವಿಧ ವಿಮಾನ ನಿಲ್ದಾಣಗಳಿಗೆ ಬಂದಿಳಿದ ನೆಚ್ಚಿನ ಆಟಗಾರರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

- Advertisement -

ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ ದುಬೈನಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಆಡಿದ ಭಾರತ ತಂಡ ಸೋಲರಿಯದ ಸರದಾರನಾಗಿ ಟ್ರೋಫಿ ಜಯಿಸಿತು. ಫೈನಲ್​ ಪಂದ್ಯದಲ್ಲಿ ಕಠಿಣ ಎದುರಾಳಿ ನ್ಯೂಜಿಲ್ಯಾಂಡ್​ ಅನ್ನು ಮಣಿಸಿತು. ಈ ಮೂಲಕ 9 ತಿಂಗಳ ಅಂತರದಲ್ಲಿ ಎರಡು ಐಸಿಸಿ ಟೂರ್ನಿಗಳನ್ನು ಗೆದ್ದುಕೊಂಡಿತು.

ಭಾರತ ತಂಡದ ನಾಯಕ ರೋಹಿತ್​ ಶರ್ಮಾ, ಶ್ರೇಯಸ್​ ಅಯ್ಯರ್​, ಹಾರ್ದಿಕ್​ ಪಾಂಡ್ಯ ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನೆರೆದಿದ್ದ ಅಭಿಮಾನಿಗಳು ಘೋಷಣೆ ಕೂಗುವ ಮೂಲಕ ಚಾಂಪಿಯನ್ನರನ್ನು ಸ್ವಾಗತಿಸಿದರು.

- Advertisement -

ರವೀಂದ್ರ ಜಡೇಜಾ, ವರುಣ್​​ ಚಕ್ರವರ್ತಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಕ್ಷರ್​ ಪಟೇಲ್​​ ಗುಜರಾತ್​​ ವಿಮಾನ ನಿಲ್ದಾಣ, ವೇಗದ ಬೌಲರ್​ ಹರ್ಷಿತ್​ ರಾಣಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

- Advertisement -


Must Read

Related Articles