Home ಟಾಪ್ ಸುದ್ದಿಗಳು ಅಧಿಕಾರಕ್ಕಾಗಿ ಅರಾಜಕತೆ ಸೃಷ್ಟಿಸುತ್ತಿರುವ ಬಿಜೆಪಿ; ರಾಮರಾಜ್ಯದ ಬದಲು ಗೂಂಡಾರಾಜ್ಯ ನಿರ್ಮಾಣ : ಎಚ್.ಎಸ್. ಸುಂದರೇಶ್

ಅಧಿಕಾರಕ್ಕಾಗಿ ಅರಾಜಕತೆ ಸೃಷ್ಟಿಸುತ್ತಿರುವ ಬಿಜೆಪಿ; ರಾಮರಾಜ್ಯದ ಬದಲು ಗೂಂಡಾರಾಜ್ಯ ನಿರ್ಮಾಣ : ಎಚ್.ಎಸ್. ಸುಂದರೇಶ್

ಶಿವಮೊಗ್ಗ: ‘ಬಿಜೆಪಿ ಸರ್ಕಾರ ಅಧಿಕಾರಕ್ಕಾಗಿ ಧರ್ಮವನ್ನು ಮುಂದೆ ತಂದು ದ್ವೇಷ ಬೆಳೆಸುತ್ತಿದ್ದು, ಅಧಿಕಾರಕ್ಕಾಗಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ. ಇಂತಹ ರಾಜಕೀಯವನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದೂ ಕಂಡಿರಲಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು, ‘ಬಡವರ ಮಕ್ಕಳನ್ನು ಬಾವಿಗೆ ದೂಡಿ ಆಳ ನೋಡುತ್ತಿರುವ ಬಿಜೆಪಿ, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರಾಮರಾಜ್ಯ ಮಾಡುತ್ತೇವೆ ಎಂದು ಹೊರಟವರು ಗೂಂಡಾರಾಜ್ಯ ಮಾಡಿದ್ದಾರೆ ಎಂದು ದೂರಿದರು.

ಇದುವರೆಗೂ ನಡೆದ ಘಟನೆಗಳಲ್ಲಿ ಕೊಲೆಯಾದವರು ಹಿಂದುಳಿದವರು, ದಲಿತರು, ಬಡವರ ಮಕ್ಕಳು ಮಾತ್ರ. ಇಂತಹ ಸಾವಿನ ಮೇಲೆ ಸಾಮ್ರಾಜ್ಯ ಕಟ್ಟಲು ಹೊರಟಿರುವ ಬಿಜೆಪಿಯವರಿಗೆ ಕನಿಷ್ಠ ಕರುಣೆಯೂ ಇಲ್ಲ. ಬಿಜೆಪಿ ಸರ್ಕಾರದಲ್ಲಿ ಹಿಂದುಳಿದವರು, ಬಡವರ ಮಕ್ಕಳು ಮಾತ್ರ ಏಕೆ ಹತ್ಯೆಗೀಡಾಗುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಏಕೆ ಸುರಕ್ಷಿತರಾಗಿರುತ್ತಾರೆ ಎಂದು ಜನರು ಯೋಚಿಸಬೇಕು’ ಎಂದು ಹೇಳಿದರು.

Join Whatsapp
Exit mobile version