ಲಾಕ್ ಡೌನ್ ತಂದಿಟ್ಟ ನಿರುದ್ಯೋಗ ಸಂಕಷ್ಟ: ಮಕ್ಕಳನ್ನು ಅನಾಥರಾಗಿಸಿ ದಂಪತಿ ಆತ್ಮಹತ್ಯೆ!

Prasthutha|

ತೆಲಂಗಾಣ: ನಿರುದ್ಯೋಗ ಹಿನ್ನಲೆಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತೆಲಂಗಾಣದ ಮೇದಕ್ ನಲ್ಲಿ ನಡೆದಿದೆ. ಕಿಶೋರ್ ಹಾಗೂ ಕವಿತಾ ಸಾವನ್ನಪ್ಪಿರುವ ದಂಪತಿ. ಇವರ ಇಬ್ಬರು ಮಕ್ಕಳು ಇದೀಗ ಅನಾಥವಾಗಿವೆ.

- Advertisement -

ಕಳೆದ ಐದು ವರ್ಷಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಹೈದರಾಬಾದ್ ಗೆ ಕಿಶೋರ್ ಹಾಗೂ ಕವಿತಾ ಆಗಮಿಸಿದ್ದರು. ಚಿಲಕಲಗುಡ್ಡದಲ್ಲಿ ಹೇರ್ ಕಟಿಂಗ್ ಸಲೂನ್ ಬಾಡಿಗೆ ಪಡೆದು ಕೆಲಸ ಮಾಡುತ್ತಿದ್ದರು. ಉದ್ಯೋಗ ಚೆನ್ನಾಗಿ ನಡೆಯುತ್ತಿದ್ದ ಕಾರಣ ಕೆಲ ವರ್ಷಗಳ ಕಾಲ ಖುಷಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ಕಳೆದ ವರ್ಷ ಕೊರೊನಾ ಸೋಂಕಿನಿಂದ ಲಾಕ್ ಡೌನ್ ಘೋಷಣೆ ಮಾಡ್ತಿದ್ದಂತೆ ಕಟಿಂಗ್ ಶಾಪ್ ಬಂದ್ ಮಾಡಬೇಕಾಯಿತು. ಹೀಗಾಗಿ ಬೇರೆ ದಾರಿ ಕಾಣದೇ ತಮ್ಮಿಬ್ಬರು ಮಕ್ಕಳೊಂದಿಗೆ ಊರಿಗೆ ವಾಪಸ್ ಆಗಿದ್ದರು.

ಕಳೆದ ನಾಲ್ಕು ದಿನಗಳ ಹಿಂದೆ ಹೈದರಾಬಾದ್ ಗೆ ವಾಪಸ್ ಆಗಿರುವ ದಂಪತಿ, ತಮ್ಮಿಬ್ಬರು ಮಕ್ಕಳನ್ನ ಅಜ್ಜನ ಊರಿಗೆ ಮರಳಿ ಕಳುಹಿಸಿದ್ದಾರೆ. ಇದಾದ ಬಳಿಕ ತಾವಿಬ್ಬರು ವಿಷ ಸೇವನೆ ಮಾಡಿದ್ದಾರೆ. ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಇವರ ಇಬ್ಬರು ಮಕ್ಕಳು ಅನಾಥವಾಗಿವೆ.

Join Whatsapp