Home ಟಾಪ್ ಸುದ್ದಿಗಳು ವಿಜಯಪುರ| ಶಿಕ್ಷಕಿಯ ಬರ್ಬರ ಹತ್ಯೆ

ವಿಜಯಪುರ| ಶಿಕ್ಷಕಿಯ ಬರ್ಬರ ಹತ್ಯೆ

ವಿಜಯಪುರ: ಸರ್ಕಾರಿ ಶಾಲಾ ಶಿಕ್ಷಕಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ಗಣೇಶ ನಗರ ಬಳಿ ನಡೆದಿದೆ.

ದಿಲ್ಶಾದ್ ಹವಾಲ್ದಾರ್ ಹತ್ಯೆಯಾಗಿರುವ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ.

ದಿಲ್ಶಾದ್ ಸಾವನ್ನಪ್ಪಿದ ಬಳಿಕ ದುಷ್ಕರ್ಮಿಗಳು ಅವರ ಪುತ್ರ ಮುಝಮ್ಮಿಲ್ ಚಕ್ಲೆರ್ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಗಾಯಗೊಂಡಿರುವ ಮುಝಮ್ಮಿಲ್ ನನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version