Home ಟಾಪ್ ಸುದ್ದಿಗಳು ತಮಿಳ್ನಾಡು: ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ; ಆರೆಸ್ಸೆಸ್ ಕಾರ್ಯಕರ್ತ ಗಣೇಶ್ ಬಾಬು ಬಂಧನ

ತಮಿಳ್ನಾಡು: ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ; ಆರೆಸ್ಸೆಸ್ ಕಾರ್ಯಕರ್ತ ಗಣೇಶ್ ಬಾಬು ಬಂಧನ

ಚೆನ್ನೈ: ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಬಲವಂತದ ಮತಾಂತರ ಆರೋಪ ಹೊರಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಕಾರ್ಯಕರ್ತ ಗಣೇಶ್ ಬಾಬು ಎಂಬಾತನನ್ನು ಬಂಧಿಸಿರುವ ಘಟನೆ ಇದುಪ್ಪುರ್ ಪುದುಕೊಟ್ಪೈ ಜಿಲ್ಲೆಯಲ್ಲಿ ನಡೆದಿದೆ.

ಬಾಬು ಮತ್ತು ಇತರ 30 ಮಂದಿ ಸೇರಿಕೊಂಡು ಕ್ರೈಸ್ತ ಸನ್ಯಾಸಿನಿಯರ ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನವನ್ನು ದೋಚಿದ್ದರು ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಮಧ್ಯೆ ಗಣೇಶ್ ಬಾಬು ಬಂಧನ ವಿರೋಧಿಸಿ ಸಂಘಪರಿವಾರದ ಕಾರ್ಯಕರ್ತರು ಇಲಪ್ಪೂರ್ ಎಂಬಲ್ಲಿ ಪ್ರತಿಭಟನೆ ಆಯೋಜಿಸಿದ್ದವು.

ಬಂಧನದ ಬಳಿಕ ಗಣೇಶ್ ಎಂಬಾತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಂಧಿತ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 147, 341, 294, 387 ಸೇರಿದಂತೆ ವಿವಿಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp
Exit mobile version