ನಿರ್ಮಲಾ ಸೀತಾರಾಮನ್ ಬಳಿ ಕ್ಷಮೆಯಾಚಿಸಿದ ತಮಿಳುನಾಡಿನ ಹೋಟೆಲ್ ಮಾಲೀಕ: ವ್ಯಾಪಕ ಆಕ್ರೋಶ

Prasthutha|

ದೆಹಲಿ: ತಮಿಳುನಾಡಿನ ಹೆಸರಾಂತ ರೆಸ್ಟೋರೆಂಟ್ ನ ಮಾಲೀಕರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಕ್ಷಮೆಯಾಚಿಸುವ ವೀಡಿಯೊ ವೈರಲ್ ಆಗಿದೆ.

- Advertisement -


ಈ ವೀಡಿಯೊ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಕೊಯಮತ್ತೂರಿನ ಐಕಾನಿಕ್ ಅನ್ನಪೂರ್ಣ ಹೊಟೇಲ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಅವರ ನಡೆಗೆ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೊಯಮತ್ತೂರಿನ ಅನ್ನಪೂರ್ಣ ರೆಸ್ಟೋರೆಂಟ್ ನಂತಹ ಸಣ್ಣ ವ್ಯಾಪಾರದ ಮಾಲೀಕರು ನಮ್ಮ ಸಾರ್ವಜನಿಕ ಸೇವಕರನ್ನು ಸರಳೀಕೃತ ಜಿಎಸ್ ಟಿ ಆಡಳಿತಕ್ಕಾಗಿ ಕೇಳಿದಾಗ, ಅವರ ವಿನಂತಿಗೆ ದುರಹಂಕಾರ ಮತ್ತು ಸಂಪೂರ್ಣ ಅಗೌರವದ ಉತ್ತರ ಸಿಗುತ್ತದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

- Advertisement -


ಇದು ಸರ್ಕಾರವು ಹೇಗೆ ನಡೆದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ ಎಂದ ರಾಹುಲ್, “ಆದರೂ, ಕೋಟ್ಯಾಧಿಪತಿ ಸ್ನೇಹಿತನು ನಿಯಮಗಳನ್ನು ಸಡಿಲಿಸಲು, ಕಾನೂನುಗಳನ್ನು ಬದಲಾಯಿಸಲು ಅಥವಾ ರಾಷ್ಟ್ರೀಯ ಆಸ್ತಿಯನ್ನು ಪಡೆಯಲು ಪ್ರಯತ್ನಿಸಿದಾಗ, ಮೋದಿ ಜಿ ರೆಡ್ ಕಾರ್ಪೆಟ್ ಹಾಸುತ್ತಾರೆ ಎಂದಿದ್ದಾರೆ.


ತಮಿಳುನಾಡು ಹೊಟೇಲ್ ಅಸೋಸಿಯೇಷನ್ ಪ್ರತಿನಿಧಿಸುವ ಶ್ರೀನಿವಾಸನ್ ಅವರು ವಿವಿಧ ಆಹಾರ ಪದಾರ್ಥಗಳಿಗೆ ಅಸಂಗತ ಜಿಎಸ್ಟಿ ದರಗಳನ್ನು ಅನ್ವಯಿಸಿರುವುದನ್ನು ಹಾಸ್ಯಮಯವಾಗಿ ಟೀಕಿಸಿದಾಗ ಪ್ರೇಕ್ಷಕರು ನಗಾಡಿದ್ದರು. ಸಂಕೀರ್ಣವಾದ ತೆರಿಗೆ ವ್ಯವಸ್ಥೆಯು ವ್ಯವಹಾರಗಳು ಮತ್ತು ಗ್ರಾಹಕರಿಬ್ಬರಿಗೂ ಹೇಗೆ ಗೊಂದಲವನ್ನು ಉಂಟುಮಾಡುತ್ತಿದೆ ಎಂಬುದನ್ನು ಅವರು ಸರಳವಾಗಿ ಈ ರೀತಿ ಹೇಳಿದ್ದಾರೆ.
ಇದಕ್ಕಾಗಿ ಬನ್ ಮತ್ತು ಕ್ರೀಂನ ಉದಾಹರಣೆಯನ್ನು ನೀಡಿದ ಅವರು, “ಬನ್ ಮೇಲೆ ಜಿಎಸ್ಟಿ ಇಲ್ಲ. ಆದರೆ ನೀವು ಅದರಲ್ಲಿ ಕ್ರೀಮ್ ಹಾಕಿದರೆ, ಜಿಎಸ್ಟಿ 18% ಆಗುತ್ತದೆ. ಗ್ರಾಹಕರು ಈಗ ಹೆಚ್ಚಿನ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಬನ್ ಮತ್ತು ಕ್ರೀಮ್ ಅನ್ನು ಪ್ರತ್ಯೇಕವಾಗಿ ಕೊಡಿ ಅಂತಾರೆ ಎಂದಿದ್ದಾರೆ.


ಮರುದಿನ, ಶ್ರೀನಿವಾಸನ್, ಸೀತಾರಾಮನ್ ಅವರನ್ನು ಮುಚ್ಚಿದ ಬಾಗಿಲಿನ ಸಭೆಯಲ್ಲಿ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರೊಂದಿಗೆ ಭೇಟಿಯಾದರು. ಶ್ರೀನಿವಾಸನ್ ಅವರು ಹಣಕಾಸು ಸಚಿವರಲ್ಲಿ ಕ್ಷಮೆಯಾಚಿಸುವ ವಿಡಿಯೊವನ್ನು ತಮಿಳುನಾಡು ಬಿಜೆಪಿ ಕಾರ್ಯಾಧ್ಯಕ್ಷ ಬಾಲಾಜಿ ಎಂಎಸ್ ಅವರು ಹಂಚಿಕೊಂಡಿದ್ದರು.


ವಿರೋಧ ಪಕ್ಷದ ನಾಯಕರು ಈ ವೀಡಿಯೊವನ್ನು ಬೆದರಿಕೆಯ ಒಂದು ರೂಪವೆಂದು ಖಂಡಿಸಿದ್ದು, ಕೇವಲ ಕಳವಳವನ್ನು ವ್ಯಕ್ತಪಡಿಸುವುದಕ್ಕಾಗಿ ಬಿಜೆಪಿಯು ಸಣ್ಣ ವ್ಯಾಪಾರ ಮಾಲೀಕರನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ


“ನಮ್ಮ ಸಣ್ಣ ವ್ಯಾಪಾರ ಮಾಲೀಕರು ಈಗಾಗಲೇ ನೋಟು ಅಮಾನ್ಯೀಕರಣ, ಪ್ರವೇಶಿಸಲಾಗದ ಬ್ಯಾಂಕಿಂಗ್ ವ್ಯವಸ್ಥೆ, ತೆರಿಗೆ ಸುಲಿಗೆ ಮತ್ತು ವಿನಾಶಕಾರಿ ಜಿಎಸ್ಟಿಯ ಹೊಡೆತಗಳನ್ನು ಸಹಿಸಿಕೊಂಡಿದ್ದಾರೆ. ಅವರಿಗೆ ಈಗ ಮತ್ತಷ್ಟು ಅವಮಾನವಾಗಿದೆ. ಆದರೆ ಅಧಿಕಾರದಲ್ಲಿರುವವರ ದುರ್ಬಲವಾದ ಅಹಂಕಾರಕ್ಕೆ ನೋವುಂಟಾದಾಗ, ಅವಮಾನವನ್ನು ಅವರು ನಿಖರವಾಗಿ ತಲುಪಿಸುತ್ತಾರೆ ಎಂದು ತೋರುತ್ತದೆ ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.



Join Whatsapp
Exit mobile version