ಕೋವಿಡ್ ನಿರ್ವಹಣೆ ಕುರಿತು ಹೈಕೋರ್ಟ್‌ಗಳ ವಿಚಾರಣೆಯಲ್ಲಿ ಮೂಗು ತೂರಿಸುವುದು ನಮ್ಮ ಉದ್ದೇಶವಲ್ಲ : ಸುಪ್ರೀಂ ಕೋರ್ಟ್ ಸ್ಪಷ್ಟನೆ

Prasthutha|

ಹೊಸದಿಲ್ಲಿ : ಸುಪ್ರೀಂಕೋರ್ಟ್‌ ದೇಶದಲ್ಲಿ ಕೊರೋನಾ ಹೆಚ್ಚಳದ ನಡುವೆ ಸ್ಥಿತಿಗತಿಗಳ ನಿರ್ವಹಣೆ ಬಗ್ಗೆ ತಿಳಿಯಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನ್ನ ಈ ಉದ್ದೇಶ ಹೈಕೋರ್ಟ್‌ಗಳ ಪ್ರಚಲಿತ ವಿಚಾರಣೆಗಳಲ್ಲಿ ಮೂಗು ತೂರಿಸುವುದು ಅಥವಾ ಅತಿಕ್ರಮಣ ನಡೆಸುವುದು ಅಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶವಿಡೀ ಕೊರೋನಾ ದಿಂದ ತತ್ತರಿಸುತ್ತಿದ್ದು,  ಪ್ರತಿದಿನ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.  ಈ ‘ರಾಷ್ಟ್ರೀಯ ಬಿಕ್ಕಟ್ಟಿನ’ ಸಮಯದಲ್ಲಿ ಸುಮ್ಮನೆ ಮೂಕ ಪ್ರೇಕ್ಷಕರಂತೆ ಇರಲು ನಮಗೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

- Advertisement -

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಬಗ್ಗೆ ಕೆಲವು ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ  ಸ್ಪಷ್ಟನೆ ನೀಡಿದ ನ್ಯಾ. ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ‘ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೋವಿಡ್‌-19 ನಿರ್ವಹಣೆ, ಅವ್ಯವಸ್ಥೆಗಳ ಸರಿಪಡಿಸುವ ಬಗ್ಗೆ ಹೈಕೋರ್ಟ್‌ ಗಳಿಂದಲೇ ನಿಗಾ ವಹಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ಕೇವಲ ಪೋಷಕ ಪಾತ್ರ ನಿರ್ವಹಿಸುತ್ತಿದೆ. ಕೆಲವು ರಾಷ್ಟ್ರೀಯ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ಕೂಡ ನಿಗಾ ವಹಿಸುವಿಕೆಯ ಹೊಣೆ ಹೊರಲಿದೆ,’ ಎಂದು ಹೇಳಿದೆ.

- Advertisement -