Home ಟಾಪ್ ಸುದ್ದಿಗಳು ಬಿಜೆಪಿ ಮೇಲೆ ನಂಬಿಕೆ ಇದ್ದರೆ ಸುಮಲತಾ ಮಂಡ್ಯದಿಂದ ಸ್ಪರ್ಧಿಸಿ ಗೆಲ್ಲಲಿ: ಸಿ.ಎಂ. ಇಬ್ರಾಹಿಂ ಸವಾಲು

ಬಿಜೆಪಿ ಮೇಲೆ ನಂಬಿಕೆ ಇದ್ದರೆ ಸುಮಲತಾ ಮಂಡ್ಯದಿಂದ ಸ್ಪರ್ಧಿಸಿ ಗೆಲ್ಲಲಿ: ಸಿ.ಎಂ. ಇಬ್ರಾಹಿಂ ಸವಾಲು

ಬೆಂಗಳೂರು: ಬಿಜೆಪಿ ಮೇಲೆ ನಂಬಿಕೆ ಇದ್ದರೆ ಸುಮಲತಾ ಮಂಡ್ಯದಿಂದ ಸ್ಪರ್ಧಿಸಿ ಗೆಲ್ಲಲಿ ಎಂದು ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಸವಾಲು ಹಾಕಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ಯಾವ ಸಿದ್ಧಾಂತದಿಂದ ತನ್ನ ರಾಜಕೀಯ ಜೀವನವನ್ನು ನಡೆಸಿದ್ದರೋ ಆ ಸಿದ್ಧಾಂತಕ್ಕೆ ಸುಮಲತಾ ಅವರು ಸಂಪೂರ್ಣವಾಗಿ ತಿಲಾಂಜಲಿ ಹಚ್ಚಿದ್ದಾರೆ. ನೀವು ಇವರನ್ನು ಬಿಜೆಪಿಗೆ ಆಯ್ಕೆ ಮಾಡ್ತಿದ್ದೀರಾ ಎಂದು ನಾವು ಕಾಗ್ರೆಸ್ ನವರಿಗೆ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲೆ ಹೇಳಿದ್ದೇವು. ಅವರು ನಮ್ಮ ಮಾತು ಕೇಳಿಲ್ಲ. ಕಾಂಗ್ರೆಸ್ ಬಿಜೆಪಿ ಎರಡು ಒಂದೇ ಎಂದರು.


ಕಾಂಗ್ರೆಸ್ ನಿಂದ ಬಿಜೆಪಿಗೆ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರ್ತಿದ್ದಾರೆ. ನಾರಾಯಣ ಗೌಡರು ಮತ್ತಿತರನ್ನು ಕಳ್ಸಿದ್ದು ಯಾರು? ನಾವು ಇವತ್ತು ಮಂಡ್ಯದಲ್ಲಿ ಪಾರ್ಲಿಮೆಂಟ್ ಗೆಲ್ಲೋದು ಕನ್ಫರ್ಮ್ ಎಂದರು.

Join Whatsapp
Exit mobile version