Home ಟಾಪ್ ಸುದ್ದಿಗಳು ನಟ ಪುನೀತ್ ಉಲ್ಲೇಖಿಸಿ ಟ್ವೀಟ್: ಅಭಿಮಾನಿಗಳ ಆಕ್ರೋಶಕ್ಕೆ ಬೆದರಿ ಕ್ಷಮೆಯಾಚಿಸಿದ ಸೂಲಿಬೆಲೆ

ನಟ ಪುನೀತ್ ಉಲ್ಲೇಖಿಸಿ ಟ್ವೀಟ್: ಅಭಿಮಾನಿಗಳ ಆಕ್ರೋಶಕ್ಕೆ ಬೆದರಿ ಕ್ಷಮೆಯಾಚಿಸಿದ ಸೂಲಿಬೆಲೆ

ಬೆಂಗಳೂರು: ಹಿಂದುತ್ವ ಪ್ರತಿಪಾದಕ ಚಕ್ರವರ್ತಿಸೂಲಿಬೆಲೆ, ದಿ.ನಟ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅಭಿಮಾನಿಗಳ ತೀವ್ರ ಆಕ್ರೋಶದ ಬಳಿಕ ಸೂಲಿಬೆಲೆ ಕ್ಷಮೆಯಾಚಿಸಿದ ಘಟನೆ ನಡೆದಿದೆ.


ನನ್ನ ಹೇಳಿಕೆ ಪುನೀತ್ ರಾಜ್ ಕುಮಾರ್ ಅವರಿಗೆ ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆಯಾಚಿಸುತ್ತೇನೆ. ಪುನೀತ್ ಅವರ ಅಭಿಯಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ.


ಸಮಯದ ಅಭಾವದಿಂದ ಸಿಎಂ ಅವರಿಗೆ ಕಡತಗಳಿಗೆ ಸಹಿ ಹಾಕಲೂ ಪುರುಸೊತ್ತಿಲ್ಲ ಎಂದು ಎಂಎಲ್ ಎಗಳು ದೂರುತ್ತಿದ್ದಾರೆ. ಆದರೆ ಸಿಎಂ ಅವರು ಯಾವುದೇ ಹೊಸ ಪ್ರೀಮಿಯರ್ ಸಿನಿಮಾ ಬಿಡುಗಡೆಯಾದಾಗ ಅದನ್ನು ವೀಕ್ಷಿಸದೆ ಇರುವುದಿಲ್ಲ.

ನಟರೊಬ್ಬರು ಇತ್ತೀಚೆಗೆ ನಿಧನರಾದಾಗ ಮೂರು ದಿನಗಳ ಕಾಲ ಸಿಎಂ ಅಲ್ಲೇ ಇದ್ದರು. ರಾಜ್ಯದಲ್ಲಿ ಕೊಲೆ ಘಟನೆಗಳು ನಡೆಯದಿದ್ದರೆ ಇಷ್ಟೊತ್ತಿಗೆ ಅವರು ವಿಕ್ರಾಂತ್ ರೋಣ ಸಿನೆಮಾ ನೋಡುತ್ತಿದ್ದರು ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದರು.


ಈ ಟ್ವೀಟ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಸೂಲಿಬೆಲೆ ಅವರು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.

Join Whatsapp
Exit mobile version