Home ಕರಾವಳಿ ಹಿಂದೂ ಐಕ್ಯ ವೇದಿಕೆಯ ಕಾರ್ಯಕರ್ತ ಆತ್ಮಹತ್ಯೆ

ಹಿಂದೂ ಐಕ್ಯ ವೇದಿಕೆಯ ಕಾರ್ಯಕರ್ತ ಆತ್ಮಹತ್ಯೆ

ಪುತ್ತೂರು: ಹಿಂದೂ ಐಕ್ಯ ವೇದಿಕೆಯ ಕಾರ್ಯಕರ್ತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕರ್ನಾಟಕ – ಕೇರಳ ಗಡಿ ಪ್ರದೇಶವಾದ ದೇಲಂಪಾಡಿಯಲ್ಲಿ ನಡೆದಿದೆ.

ಈಶ್ವರಮಂಗಲ ಮೈಯಳ ನಿವಾಸಿ ಜೀವನ್ (24) ಆತ್ಮಹತ್ಯೆ ಮಾಡಿಕೊಂಡಾತ. ಸಂಘಪರಿವಾರದ ಕಾರ್ಯಕರ್ತನಾಗಿದ್ದ ಈತ ಲೈಟಿಂಗ್ಸ್ ಮತ್ತು ಶಾಮಿಯಾನ ಅಂಗಡಿಯಲ್ಲಿ ಕೆಲಸಕ್ಕಿದ್ದ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇತ್ತೀಚೆಗಷ್ಟೇ ಸಂಘಪರಿವಾರದ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಜ್ಯೋತಿಷ್ ಎಂಬಾತ ಕಾಸರಗೋಡು ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ.

Join Whatsapp
Exit mobile version