ಮಲಯಾಳಂ ಕವಯತ್ರಿ, ಪರಿಸರವಾದಿ ಸುಗತ ಕುಮಾರಿ ನಿಧನ

Prasthutha|

ತಿರುವನಂತಪುರಂ : ಖ್ಯಾತ ಮಲಯಾಳಂ ಕವಯತ್ರಿ ಹಾಗೂ ಪರಿಸರವಾದಿ ಸುಗತ ಕುಮಾರಿ (86) ಕೋವಿಡ್‌-19ನಿಂದಾಗಿ ಬುಧವಾರ ನಿಧನರಾಗಿದ್ದಾರೆ.

- Advertisement -

ಕೋವಿಡ್ ಪೀಡಿತರಾಗಿದ್ದ ಅವರು ಕೆಲ ದಿನಗಳಿಂದ ತಿರುವನಂತಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶ ಸಮಸ್ಯೆ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಮಂಗಳವಾರ ಅವರಿಗೆ ಹೃದಯಾಘಾತವೂ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ ಅವರು ನಿಧನರಾದರು. ಸುಗತ ಕುಮಾರಿ ಅವರಿಗೆ ಪುತ್ರಿ ಲಕ್ಷ್ಮೀ ಇದ್ದಾರೆ.

1960ರಲ್ಲಿ ತಮ್ಮ ಕವಿತೆಗಳಿಂದ ಪ್ರವರ್ಧಮಾನಕ್ಕೆ ಬಂದಿದ್ದ ಸುಗತ ಕುಮಾರಿ, ನಂತರ ದಿನಗಳಲ್ಲಿ ಪರಿಸರವಾದಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ಸುಗತ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ಪ್ರದಾನ ಮಾಡಲಾಗಿದೆ. 

- Advertisement -

ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶವಾಗದಂತೆ ತಡೆಯಲು ‘ಸೇವ್ ಸೈಲೆಂಟ್ ವ್ಯಾಲಿ’ ಚಳವಳಿಯ ನೇತೃತ್ವವನ್ನು ಸುಗತ ಕುಮಾರಿ ವಹಿಸಿ ಯಶಸ್ವಿ ಚಳವಳಿ ರೂಪಿಸಿದ್ದರು. ನಿರ್ಗತಿಕ ಮಹಿಳೆಯರು-ಮಕ್ಕಳು ಹಾಗೂ ಮಾನಸಿಕ ಅಸ್ವಸ್ಥರಿಗಾಗಿ ಅವರು ಅಭಯ ಮತ್ತು ಅಥಾನಿ ಹೆಸರಿನಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಗಳನ್ನೂ ಕೈಗೊಂಡಿದ್ದರು. ಕೇರಳ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿ ಅವರು ಗಮನ ಸೆಳೆದಿದ್ದರು.

Join Whatsapp