ಪಾಠದ ನಡುವೆಯೇ ಶಿಕ್ಷಕನ ತಲೆಗೆ ಬಕೆಟ್ ಹಾಕಿ ಹಲ್ಲೆ ನಡೆಸಿದ ವಿದ್ಯಾರ್ಥಿಗಳು !

Prasthutha|

ದಾವಣಗೆರೆ: ಶಾಲೆಯಲ್ಲಿ ಶಿಕ್ಷಕನೊಬ್ಬ ಪಾಠ ಮಾಡುತ್ತಿರುವ ನಡುವೆಯೇ ತಲೆಗೆ ಬಕೆಟ್ ಹಾಕಿ ನಾಲ್ಕೈದು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ನಡೆದಿದೆ. ವಿದ್ಯಾರ್ಥಿಗಳಿಗೆ ಹಿಂದಿ ಪಠ್ಯವನ್ನು ಬೋಧಿಸುತ್ತಿದ್ದ ಶಿಕ್ಷಕ ಶ್ರೀನಿವಾಸ್ ಗೌಡ ಮೇಲೆ ವಿದ್ಯಾರ್ಥಿಗಳು ದುರ್ವರ್ತನೆ ತೋರಿ, ಹಲ್ಲೆ ನಡೆಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಶಿಕ್ಷಕ ಶ್ರೀನಿವಾಸ್ ಪಾಠ ಮಾಡಲೆಂದು ತರಗತಿಗೆ ಬಂದಿದ್ದಾರೆ, ಆದರೆ ಪಾಠ ಕೇಳಿಸಿಕೊಳ್ಳದ ನಾಲ್ಕೈದು ವಿದ್ಯಾರ್ಥಿಗಳು ಪುಂಡತನ ಮೆರೆದು ಶಿಕ್ಷಕನೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ಇದೀಗ ಹಲ್ಲೆ ನಡೆಸಿರುವ ದೃಶ್ಯಾವಳಿಯನ್ನು ಉಳಿದ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು,, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp