Home ಟಾಪ್ ಸುದ್ದಿಗಳು ಮಹಾರಾಷ್ಟ್ರ ಗಡಿಯಲ್ಲಿ KSRTC ಬಸ್ ಗೆ ಕಲ್ಲು ತೂರಾಟ; ತಾತ್ಕಾಲಿಕ ಬಸ್ ಸಂಚಾರ ಸ್ಥಗಿತ

ಮಹಾರಾಷ್ಟ್ರ ಗಡಿಯಲ್ಲಿ KSRTC ಬಸ್ ಗೆ ಕಲ್ಲು ತೂರಾಟ; ತಾತ್ಕಾಲಿಕ ಬಸ್ ಸಂಚಾರ ಸ್ಥಗಿತ

ಬೆಳಗಾವಿ: ಪುಣೆಯಿಂದ ಅಥಣಿಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಮಹಾರಾಷ್ಟ್ರದ ಗಡಿಯಲ್ಲಿ ರಾತ್ರಿ, ಕೆಲ ಕಿಡಿಗೇಡಿಗಳು ಕಲ್ಲು ತೂರಿದ ಪರಿಣಾಮ ಬಸ್ಸಿನ ಮುಂಭಾಗದ ಗಾಜು ಹಾಗೂ ಎರಡು ಕಿಟಕಿ ಒಡೆದಿವೆ.


ಸಂಚರಿಸುವ ಬಸ್ ಗೆ ಅಡ್ಡಬಂದ ಕಿಡಿಗೇಡಿಗಳು ಕಲ್ಲೆಸೆದಿದ್ದು, ಚಾಲಕ ಕುಳಿತಿದ್ದ ಭಾಗದಲ್ಲಿ ಗಾಜು ಒಡೆದರೂ ಚಾಲಕ ವಾಹನ ನಿಲ್ಲಿಸದೇ ಸುರಕ್ಷಿತವಾಗಿ ಪಾರಾಗಿದ್ದಾರೆ.


ಕಾಗವಾಡ ಮಾರ್ಗವಾಗಿ ಪ್ರತಿ ದಿನ ಹಲವು ಪ್ರಯಾಣಿಕರು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದು, ಕಿಡಿಗೇಡಿಗಳು ಇದೇ ಬಸ್ಸುಗಳನ್ನು ಗುರಿಯಾಗಿಸಿ ಗಲಾಟೆ ಮುಂದುವರಿಸಿದ್ದಾರೆ. ಮೀರಜ್ ಮಾರ್ಗವಾಗಿ ಸಂಚರಿಸುವ ಕರ್ನಾಟಕದ ಎಲ್ಲ ಬಸ್ ಸಂಚಾರವನ್ನು ಶನಿವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Join Whatsapp
Exit mobile version