Home ಟಾಪ್ ಸುದ್ದಿಗಳು ವಂದೇ ಭಾರತ್ ಎಕ್ಸ್​ಪ್ರೆಸ್​​ಗೆ ರಾಮನಗರ ಬಳಿ ಕಲ್ಲೆಸೆತ, ಗಾಜು ಪುಡಿ

ವಂದೇ ಭಾರತ್ ಎಕ್ಸ್​ಪ್ರೆಸ್​​ಗೆ ರಾಮನಗರ ಬಳಿ ಕಲ್ಲೆಸೆತ, ಗಾಜು ಪುಡಿ

ರಾಮನಗರ: ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ರಾಮನಗರ ಬಳಿ ಶುಕ್ರವಾರ ಮಧ್ಯಾಹ್ನ 2.20ರ ಸುಮಾರಿಗೆ ನಡೆದಿದೆ.

ರಾಮನಗರ ತಾಲ್ಲೂಕಿನ ವಡೇರಹಳ್ಳಿ ಬಳಿ ಮೈಸೂರನಿಂದ ಬೆಂಗಳೂರು ಕಡೆ ರೈಲು ಸಂಚರಿಸುತ್ತಿದ್ದಾಗ ಕಲ್ಲೆಸೆಯಲಾಗಿದೆ.

ಕಲ್ಲು ಎಸೆದಿರುವ ರಭಸಕ್ಕೆ ವಂದೆ ಭಾರತ್ ರೈಲಿನ ಗಾಜು ಪುಡಿಪುಡಿಯಾಗಿದೆ. ಸ್ಥಳಕ್ಕೆ ಮಂಡ್ಯ ರೈಲ್ವೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲು ಎಸೆದಿರುವ ಕಿಡಿಗೇಡಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.

ಇತ್ತೀಚೆಗೆ ನೂತನವಾಗಿ ಸಂಚಾರ ಆರಂಭಿಸಿದ್ದ ಧಾರವಾಡ ಬೆಂಗಳೂರು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಎರಡು ದಿನಗಳ ಹಿಂದಷ್ಟೇ ಚಿಕ್ಕಮಗಳೂರಿನಲ್ಲಿ ಕಿಡಿಗೇಡಿಗಳು ಕಲ್ಲೆಸೆದಿದ್ದರು. ಬೀರೂರು ಪಟ್ಟಣದ ಸಮೀಪ ಕಲ್ಲು ತೂರಾಟ ನಡೆಸಲಾಗಿತ್ತು. ಜುಲೈ 1ರಂದು ಕೂಡ ಧಾರವಾಡದಿಂದ ದಾವಣಗೆರೆಗೆ ಸಂಚರಿಸುತ್ತಿದ್ದ ವೇಳೆ ವಂದೇ ಭಾರತ್ ರೈಲಿಗೆ ಕಲ್ಲು ಎಸೆಯಲಾಗಿತ್ತು. ಆರೋಪಿಗಳನ್ನು ನಂತರ ವಶಕ್ಕೆ ಪಡೆಯಲಾಗಿತ್ತು.

Join Whatsapp
Exit mobile version