ರಾಜ್ಯ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಪೊಲೀಸ್ ವಶಕ್ಕೆ

Prasthutha|

ಹಾಸನ: ದೇಶಾದ್ಯಂತ ಎಸ್.ಡಿ.ಪಿ.ಐ, ಪಿ ಎಫ್ ಐ ಕಾರ್ಯಕರ್ತರ ಮನೆ ಮೇಲೆ ದಾಳಿನಡೆದಿದ್ದು, ರಾಜ್ಯ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರನ್ನು ಹಾಸನದಿಂದ ಪೊಲೀಸರು ಬಂಧಿಸಿದ್ದಾರೆ.

- Advertisement -

ಕೊಡಗು ಜಿಲ್ಲೆ ಕೊಡ್ಲಿಪೇಟೆ ಮೂಲದ ಅಪ್ಸರ್ ಸೋಮವಾರ ಹಾಸನಕ್ಕೆ ಬಂದು ನೆಲೆಸಿದ್ದರು. ಹಾಸನ ಪೊಲೀಸರ ಸಹಕಾರದೊಂದಿಗೆ ಶನಿವಾರಸಂತೆ ಪೊಲೀಸರು ಮಂಗಳವಾರ ದಾಳಿ ನಡೆಸಿ ಬಂಧಿಸಿದ್ದಾರೆ.

ವಿಚಾರಣೆಗಾಗಿ ಸೋಮವಾರಪೇಟೆ ತಹಶೀಲ್ದಾರ್ ಎದುರು ಅಪ್ಸರ್ ಕೊಡ್ಲಿಪೇಟೆ ಅವರನ್ನು  ಪೊಲೀಸರು ಹಾಜರುಪಡಿಸಲಿದ್ದಾರೆ.

Join Whatsapp