Home ಗಲ್ಫ್ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಫೋರಂ ಒಮಾನ್ ನಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಫೋರಂ ಒಮಾನ್ ನಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ

ಒಮಾನ್, ಆ.3 : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಫೋರಂ ಒಮಾನ್  ವತಿಯಿಂದ ಸ್ವರಚಿತ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಕವನದ ಮುಖ್ಯ ವಿಷಯವು ‘ಯಾರಿಗೆ ಬಂತು ಸ್ವಾತಂತ್ರ್ಯ’?ವಾಗಿದೆ. ಕವನವನ್ನು ಕಳುಹಿಸಲು ಆಗಸ್ಟ್ 12, 2021 ಕೊನೆಯ ದಿನಾಂಕವಾಗಿರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ 4444 ರೂ. ನಗದು ಮತ್ತು ಪ್ರಶಸ್ತಿ ಪತ್ರ,  ದ್ವಿತೀಯ 2222 ರೂ. ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ  ತೃತೀಯ 1111 ನಗದು ಮತ್ತು ಪ್ರಶಸ್ತಿ ಪತ್ರ ನಿಗದಿಪಡಿಸಲಾಗಿದೆ.

ಕವನವು ಮೇಲೆ ತಿಳಿಸಿದ ವಿಷಯದಲ್ಲಿರಬೇಕು. ಕಡ್ಡಾಯವಾಗಿ ಕನ್ನಡದಲ್ಲಿರಬೇಕು, ಕವನವು ಸ್ವರಚಿತವಾಗಿರಬೇಕು ಮತ್ತು ಈ ಮೊದಲು ಪ್ರಕಟಗೊಂಡಿರಬಾರದು

ಅನಿವಾಸಿ ಕನ್ನಡಿಗರಿಗೂ ಸ್ಪರ್ಧೆಯಲ್ಲಿ ಪಾಳ್ಗೊಳ್ಳುವ ಅವಕಾಶವಿದ್ದು

ಕವನವನ್ನು +968 78398192 ವಾಟ್ಸಪ್ ನಂಬರಿಗೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು. ಅದರಲ್ಲಿ ಹೆಸರು, ಊರು,ವಿಳಾಸ ಸ್ಪಷ್ಟವಾಗಿ ನಮೂದಿಸಿರಬೇಕು ಎಂದು ಎಸ್ ಎಫ್ ಒ ಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version