Home ಟಾಪ್ ಸುದ್ದಿಗಳು ಮಾರ್ಚ್ ಮೊದಲ ವಾರದಲ್ಲಿ’ರಾಜ್ಯ ಬಜೆಟ್ ಮಂಡನೆ’: ಸಿಎಂ ಬೊಮ್ಮಾಯಿ

ಮಾರ್ಚ್ ಮೊದಲ ವಾರದಲ್ಲಿ’ರಾಜ್ಯ ಬಜೆಟ್ ಮಂಡನೆ’: ಸಿಎಂ ಬೊಮ್ಮಾಯಿ

ಬೆಂಗಳೂರು : ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, “ಸವಾಲು ಎದುರಿಸಬಲ್ಲ ಆತ್ಮವಿಶ್ವಾಸ ನಮಗೆ ಕೇವಲ 6 ತಿಂಗಳ ಅವಧಿಯಲ್ಲಿ ಬಂದಿದ್ದು, ರಾಜ್ಯದ ಜನರಿಟ್ಟಿರುವ ವಿಶ್ವಾಸಕ್ಕೆ ಗೌರವ ಬರುವಂತೆ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಒಳ್ಳೆಯ ಸಚಿವ ಸಂಪುಟ ಇದೆ. ಕೊರೊನಾ ಸಮಯದಲ್ಲಿ ಹಲವರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಇನ್ನು ಸರ್ಕಾರಕ್ಕೆ ಎಷ್ಟೇ ಕಷ್ಟಬಂದರೂ, ಎಷ್ಟೇ ಹಣದ ಸಂಕಷ್ಟ ಆದರೂ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವುದಿಲ್ಲ.ರಾಜ್ಯದಲ್ಲಿ 14 ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ. ವಿಶೇಷ ಚೇತನರಿಗೆ ಮಾಸಿಕ 800 ರೂ. ಹೆಚ್ಚಿಸಿದ್ದೇವೆ. ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ . ಹೀಗಾಗಿ ಈ ಬಾರಿಯ ಬಜೆಟ್ ಕೂಡಾ ರೈತರ ಪರವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

Join Whatsapp
Exit mobile version