Home ಕರಾವಳಿ ಮಂಗಳೂರು | ಚಲಿಸುವ ಬಸ್ ನಿಂದ ಪ್ರಯಾಣಿಕರು ಬಿದ್ದರೆ ಸಿಬ್ಬಂದಿಯೇ ಹೊಣೆ: ಪೊಲೀಸ್ ಕಮಿಷನರ್

ಮಂಗಳೂರು | ಚಲಿಸುವ ಬಸ್ ನಿಂದ ಪ್ರಯಾಣಿಕರು ಬಿದ್ದರೆ ಸಿಬ್ಬಂದಿಯೇ ಹೊಣೆ: ಪೊಲೀಸ್ ಕಮಿಷನರ್

ಮಂಗಳೂರು: ಚಲಿಸುವ ಬಸ್ ನಿಂದ ಪ್ರಯಾಣಿಕರು ಬಿದ್ದರೆ ಬಸ್ ಸಿಬ್ಬಂದಿಯೇ ಹೊಣೆಯಾಗಬೇಕಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.


ಚಲಿಸುವ ಬಸ್ ನಿಂದ ಬಿದ್ದು ಮೃತರಾದ ಯಶ್ ರಾಜ್ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ನಲ್ಲಿ ಪ್ರಯಾಣಿಕರು ನೇತಾಡುವುದು ಕಂಡರೆ ಕೂಡಲೇ ಬಸ್ ಗಳನ್ನು ನಿಲ್ಲಿಸಿ, ಬಸ್ಸಿನೊಳಗೆ ಪ್ರಯಾಣಿಕ ಬಾರದೆ ಬಸ್ ಚಲಾಯಿಸಬಾರದು. ಹಾಗೆ ಮಾಡಿ ಏನಾದರೂ ಅವಘಡ ಸಂಭವಿಸಿದರೆ ಬಸ್ ಸಿಬ್ಬಂದಿಯನ್ನೇ ನೇರ ಹೊಣೆ ಮಾಡಲಾಗುತ್ತದೆ ಎಂದು ತಿಳಿಸಿದರು.


ಶೋಕಿ ಮನಸ್ಥಿತಿ ಬಿಟ್ಟು ಜೀವದ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಇದೇ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ಯುವಕರಿಗೆ ಕಿವಿಮಾತು ಹೇಳಿದರು.

Join Whatsapp
Exit mobile version