ಕೊರೊನಾ ವಾರಿಯರ್ಸ್ ಗಳಾದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಸಿಬ್ಬಂದಿಗಳು

Prasthutha|

ಮಂಗಳೂರು: ಕೇಂದ್ರ ಕೈಗಾರಿಕಾ ವಿಭಾಗದಲ್ಲಿ ಪ್ರಥಮವಾಗಿ ಕೊರೊನಾ ವಾರಿಯರ್ಸ್ ಗಳಾದ
ಕೂಳೂರು ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯ (ಕೆಐಒಸಿಎಲ್)ನ ಸಿಐಎಸ್ಎಫ್, ಅಗ್ನಿಶಾಮಕ ವೈದ್ಯಕೀಯ ಸಿಬ್ಬಂದಿ, ಹಾಗೂ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ಲಸಿಕೆ ಹಾಕುವಿಕೆ ಬುಧವಾರ ಜರುಗಿತು. 150 ಮಂದಿಗೆ ಬೂಸ್ಟರ್ ಡೋಸ್ ವಿತರಿಸಲಾಯಿತು.

- Advertisement -


ನಗರ ಕುಂಜತ್ತಬೈಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಲಸಿಕೆ ಹಾಕಲು ಶ್ರಮಿಸಿದರು.
ಈ ಸಂದರ್ಭ ಕುದುರೆ ಮುಖ ಕಬ್ಬಿಣದ ಅದಿರು ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಜಂಟಿ ಮಾಹ ಪ್ರಬಂಧಕರು ಪಳನಿ, ಹಿರಿಯ ಪ್ರಬಂಧಕರು ಎಚ್.ಆರ್ ಮತ್ತು ಆಡಳಿತ ಮುರುಗೇಶ್ ಎಸ್., ಸಹಾಯಕ ಕಮಾಂಡೆಂಟ್ ಸಿಐಎಸ್ ಎಫ್ ಕೆಐಒಸಿಎಲ್ ಸಂತೋಷ್ ಕುಮಾರ್
ಉಪಸ್ಥಿತರಿದ್ದರು.

Join Whatsapp