Home ಕರಾವಳಿ ಬೆಳ್ತಂಗಡಿ | ಕಾಡಿನ ನಡುವೆ ಆಟೊ ಚಾಲಕನಿಗೆ ಚೂರಿಯಿಂದ ಇರಿದು ಪರಾರಿಯಾದ ಆರೋಪಿ

ಬೆಳ್ತಂಗಡಿ | ಕಾಡಿನ ನಡುವೆ ಆಟೊ ಚಾಲಕನಿಗೆ ಚೂರಿಯಿಂದ ಇರಿದು ಪರಾರಿಯಾದ ಆರೋಪಿ

ಬೆಳ್ತಂಗಡಿ : ಇಲ್ಲಿನ ಉಜಿರೆ ನಿವಾಸಿಯೊಬ್ಬರಿಗೆ ತಾಲೂಕಿನ ನಿಡಿಗಲ್ ಸೀಟು ಎಂಬಲ್ಲಿ ಚೂರಿ ಇರಿದು, ಆರೋಪಿ ಪರಾರಿಯಾದ ಬಗ್ಗೆ ವರದಿಯಾಗಿದೆ.

ಉಜಿರೆ ಗ್ರಾಮದ ಗುರಿಪಳ್ಳ ಮಾಳಿಗೆ ಮನೆ ನಿವಾಸಿ ಸದಾನಂದ (58) ಎಂಬ ಆಟೋ ಚಾಲಕನ ಮೇಲೆ ಈ ದಾಳಿ ನಡೆದಿದೆ. ಆಟೊ ರಿಕ್ಷಾ ಬಾಡಿಗೆಗೆ ಪಡೆದು, ಆಟೊ ಕಾಡಿನ ಹಾದಿಯಲ್ಲಿ ಸಾಗುತ್ತಿದ್ದಂತೆ, ಆರೋಪಿ ಸದಾನಂದ ಅವರಿಗೆ ಇರಿದು ಪರಾರಿಯಾಗಿದ್ದಾನೆ.

ಆರೋಪಿಯನ್ನು ಗುರಿಪಳ್ಳ ನಿವಾಸಿ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಕುತ್ತಿಗೆ ಭಾಗಕ್ಕೆ ಗಾಯಗೊಂಡಿರುವ ಸದಾನಂದ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ, ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version