Home ಟಾಪ್ ಸುದ್ದಿಗಳು ನಾಗರಿಕ ಹಕ್ಕುಗಳನ್ನು ನಿರಾಕರಿಸಿದ ನ್ಯಾಯಾಲಯ: ಎಸ್ ಎಸ್ ಎಫ್ ಖಂಡನೆ

ನಾಗರಿಕ ಹಕ್ಕುಗಳನ್ನು ನಿರಾಕರಿಸಿದ ನ್ಯಾಯಾಲಯ: ಎಸ್ ಎಸ್ ಎಫ್ ಖಂಡನೆ

ತಿರುವನಂತಪುರಂ: ಶಿರವಸ್ತ್ರ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ನಾಗರಿಕ ಹಕ್ಕುಗಳ ನಿರಾಕರಣೆಯಾಗಿದೆ ಎಂದು ಕೇರಳ ರಾಜ್ಯ  ಎಸ್ ಎಸ್ ಎಫ್ ಅಸಮಾಧಾನ ವ್ಯಕ್ತಪಡಿಸಿದೆ.

ಶಿರವಸ್ತ್ರ ಧಾರಣೆ ಮುಸ್ಲಿಂ ಧಾರ್ಮಿಕ ಆಚರಣೆಯ ಅತ್ಯಗತ್ಯ ಭಾಗವಲ್ಲ ಎಂಬುವುದು ಅತ್ಯಂತ ವಿಚಿತ್ರ ಸಂಶೋಧನೆಯಾಗಿದೆ ಎಂದು ಎಸ್ ಎಸ್ ಎಫ್ ಹೇಳಿದೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಾರದು, ಕಡ್ಡಾಯವಾಗಿ ಸರ್ಕಾರದ ಸಮವಸ್ತ್ರ ಆದೇಶ ಪಾಲನೆ ಮಾಡಬೇಕು ಎಂಬ ಕರ್ನಾಟಕ ಹೈಕೋರ್ಟ್ ನ ತೀರ್ಪು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ನ ಮೊರೆ ಹೋಗಲು ನಿರ್ಧರಿಸಿದ್ದಾರೆ.

Join Whatsapp
Exit mobile version