ಶ್ರೀನಗರ: ಭಯೋತ್ಪಾದಕ ಎಂದು ಭಾವಿಸಿ ಸಹೋದ್ಯೋಗಿಗೆ ಗುಂಡಿಕ್ಕಿದ ಪೊಲೀಸ್‌ ಅಧಿಕಾರಿ

Prasthutha|

ಶ್ರೀನಗರ: ಪೊಲೀಸ್ ಒಬ್ಬರು ತನ್ನ ಸಹೋದ್ಯೋಗಿಗೆ ಭಯೋತ್ಪಾದಕ ಎಂದು ತಪ್ಪಾಗಿ ಭಾವಿಸಿ ಗುಂಡಿಕ್ಕಿದ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಶ್ರೀನಗರ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ಲೌಡ್ ಸ್ಪೀಕರ್ ನಲ್ಲಿ ಕೂಗಿ ಹೇಳಲಾಗಿತ್ತು. ಆದರೆ ಮೃತಪಟ್ಟ ಪೊಲೀಸ್ ಇದಕ್ಕೆ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರಿಂದ ಭಯೋತ್ಪಾದಕನೇ ಇರಬೇಕೆಂದು ಭಾವಿಸಿ ಫೈರಿಂಗ್ ಮಾಡಿದ್ದರಿಂದ ಈ ಘಟನೆ ನಡೆದಿದೆ.

- Advertisement -