Home ಟಾಪ್ ಸುದ್ದಿಗಳು ಶ್ರೀನಗರ | ಪೊಲೀಸರ ಚಿತ್ರಹಿಂಸೆಯ ಬಳಿಕ ಮುಸ್ಲಿಮ್ ಯುವಕ ಸಾವು !

ಶ್ರೀನಗರ | ಪೊಲೀಸರ ಚಿತ್ರಹಿಂಸೆಯ ಬಳಿಕ ಮುಸ್ಲಿಮ್ ಯುವಕ ಸಾವು !

ಶ್ರೀನಗರ: ಪೊಲೀಸರು ನೀಡಿದ ಚಿತ್ರಹಿಂಸೆಯಿಂದಾಗಿ 21 ವರ್ಷದ ಮುಸ್ಲಿಮ್ ಯುವಕ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಜುಲೈ 9 ರಂದು ಬೆಳಿಗ್ಗೆ ಕಳ್ಳತನದ ಆರೋಪದಲ್ಲಿ ಮುನೀರ್ ಎಂಬಾತನನ್ನು ಠಾಣೆಗೆ ಕರೆದೊಯ್ದ ಪೊಲೀಸರು, ಅಲ್ಲಿ ಸಾಕಷ್ಟು ಚಿತ್ರಹಿಂಸೆ ನೀಡಿದ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆತನನ್ನು ನಮಗೆ ಒಪ್ಪಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ ಎಂದು ಕುಟುಂಬಸ್ಥರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version