Home ಟಾಪ್ ಸುದ್ದಿಗಳು ಮಳೆಯಿಂದಾಗುವ ಹಾನಿಯಿಂದ ರಕ್ಷಣೆ ಹೊಂದಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ದ‌.ಕ. ಖಾಝಿ ಕರೆ

ಮಳೆಯಿಂದಾಗುವ ಹಾನಿಯಿಂದ ರಕ್ಷಣೆ ಹೊಂದಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ದ‌.ಕ. ಖಾಝಿ ಕರೆ

ಮಂಗಳೂರು: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಿಂದಾದ ದುರಂತ‌ ಮತ್ತು ಭಾರೀ ಮಳೆಯಿಂದ ಆಗುತ್ತಿರುವ ಅಪಾರ ಹಾನಿ ಸಂಬಂಧವಾಗಿ ಎಲ್ಲಾ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಮಳೆಯಿಂದ ಆಗುವ ಹಾನಿಯಿಂದ ರಕ್ಷಣೆ ಹೊಂದಲು ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಬೇಕು ಎಂದು ತಿಳಿಸಿದ ಅವರು, ನಾಡಿನ ಹಲವೆಡೆ ರಸ್ತೆ ಜನಜೀವನ ಅಸ್ತವ್ಯಸ್ಥಗೊಂಡಿವೆ. ಹಾಗಾಗಿ ಸಂಕಷ್ಟದಲ್ಲಿರುವವರಿಗೆ ಎಲ್ಲರೂ ಸಹಕರಿಸಬೇಕು, ನೆರವಿಗೆ ಧಾವಿಸಬೇಕು ಎಂದೂ ಜನರಲ್ಲಿ ಮನವಿ ಮಾಡಿದ್ದಾರೆ.

Join Whatsapp
Exit mobile version