Home ಟಾಪ್ ಸುದ್ದಿಗಳು ಚಿಕಿತ್ಸೆಗೆ ಹಣವಿಲ್ಲದೆ ರೋಗಿಷ್ಠ ತಾಯಿಯನ್ನೇ ಕೊಂದ ಮಗ !

ಚಿಕಿತ್ಸೆಗೆ ಹಣವಿಲ್ಲದೆ ರೋಗಿಷ್ಠ ತಾಯಿಯನ್ನೇ ಕೊಂದ ಮಗ !

ಕಲಬುರಗಿ: ಚಿಕಿತ್ಸೆಗೆ ಹಣವಿಲ್ಲದೆ ಅನಾರೋಗ್ಯ ಹೊಂದಿದ ತಾಯಿಯನ್ನು ಮಗ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಬಿಳವಾರ ಗ್ರಾಮದಲ್ಲಿ ನಡೆದಿದೆ.

ಭೀಮಾಶಂಕರ ಎಂಬಾತ ತಾಯಿ ರಾಚಮ್ಮ ಶರಬಣ್ಣ ಯಳಿಮೇಲಿ (60) ಅವರನ್ನು ಸ್ನೇಹಿತನ ಸಹಾಯದಿಂದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಸಮೀಪದ ಭೀಮಾನದಿ ಹತ್ತಿರಕ್ಕೆ ಕರೆ ತಂದು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾನೆ.

ಸಂಶಯ ಬಂದು ಅಜ್ಜಿಯನ್ನು ಎಲ್ಲಿ ಬಿಟ್ಟು ಬಂದಿದ್ದೀಯಾ ಎಂದು ಗದರಿಸಿ ಕೇಳಿದಾಗ ಆರೋಪಿ ಭೀಮಾಶಂಕರ ಸತ್ಯ ಬಾಯಿ ಬಿಟ್ಟಿದ್ದಾನೆ. ಸಂಬಂಧಿಕರೊಬ್ಬರು ಮಾರ್ಚ್ 29ರಂದು ಭೀಮರಾಯನ ಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.ದೂರು ಆಧರಿಸಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರು ಪುತ್ರ ಭೀಮಾಶಂಕರನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Join Whatsapp
Exit mobile version