Home ಟಾಪ್ ಸುದ್ದಿಗಳು ತಾಯಿಯ ಹತ್ಯೆಗೆ ಮಗನಿಂದನೇ ಸುಪಾರಿ!

ತಾಯಿಯ ಹತ್ಯೆಗೆ ಮಗನಿಂದನೇ ಸುಪಾರಿ!

ಬೆಂಗಳೂರು: ಆಸ್ತಿ ವಿಚಾರವಾಗಿ ತಾಯಿಯನ್ನೇ ಮಗನೊಬ್ಬ ಸುಪಾರಿ ಕೊಟ್ಟು ಕೊಲೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಧರ್ಮಚತ್ರ ಬಳಿಯ ನಿವಾಸಿ ನಳಿನಿ (55) ಕೊಲೆಯಾದವರು, ನಳಿನಿ ದೇವಸ್ಥಾನದಿಂದ ಹಿಂದಿರುಗುವ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಭೀಕರವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಗಂಭೀರ ಗಾಯಗೊಂಡ ನಳಿನಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ, ಆಸ್ತಿ ವಿಚಾರವೇ ನಳಿನಿ ಅವರ ಹತ್ಯೆಗೆ ಮೂಲ ಕಾರಣವೆಂದು ತಿಳಿದು ಬಂದಿದೆ.

ಕೊಲೆಗೈದ ದುಷ್ಕರ್ಮಿಗಳು ಪರಾರಿಯಾಗುವ ಸಂದರ್ಭ ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸ್ ವಿಚಾರಣೆಯಲ್ಲಿ ಸ್ವಂತ ಮಗನೇ ಸುಪಾರಿ ನೀಡಿರುವ ಸತ್ಯಾಂಶ ಬಯಲಾಗಿದೆ. ಆಸ್ತಿ ವಿಚಾರವಾಗಿ ತಾಯಿಯೊಂದಿಗೆ ವೈಮನಸ್ಸು ಹೊಂದಿದ್ದ ಪುತ್ರ ಈ ಕೃತ್ಯ ನಡೆಸಲು ಸುಪಾರಿ ನೀಡಿದ್ದಾನೆ ಎನ್ನಲಾಗಿದೆ. ಇನ್ನು ಪರಾರಿಯಾಗಿರುವ ಪುತ್ರನಿಗೆ ಶೋಧ ನಡೆಸಲಾಗಿದೆ ಎಂದು ಚಿಕ್ಕಬಳ್ಳಾಪುರ ಟೌನ್ ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version