Home ಗಲ್ಫ್ ಮಸ್ಕತ್: ಮುಂಬೈ ಮೂಲದ ವ್ಯಕ್ತಿ ನಿಧನ | ದಫನ ಕಾರ್ಯ ನೆರವೇರಿಸಿದ ಸೋಶಿಯಲ್ ಫೋರಮ್

ಮಸ್ಕತ್: ಮುಂಬೈ ಮೂಲದ ವ್ಯಕ್ತಿ ನಿಧನ | ದಫನ ಕಾರ್ಯ ನೆರವೇರಿಸಿದ ಸೋಶಿಯಲ್ ಫೋರಮ್

ಮಸ್ಕತ್: ಹಲವು ದಿನಗಳಿಂದ ಇಲ್ಲಿನ ಬರ್ಕಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಂಬೈ ಥಾಣೆ ನಿವಾಸಿ ನೂರುದ್ದೀನ್ ಅಬ್ದುಲ್ಲಾ ಖತ್ರಿ (41) ಶುಕ್ರವಾರ ಮುಂಜಾನೆ ಮೃತಪಟ್ಟಿದ್ದು, ಪ್ರಾರ್ಥಿವ ಶರೀರದ ಅಂತಿಮ ವಿಧಿವಿಧಾನವನ್ನು ಸೋಶಿಯಲ್ ಫೋರಮ್ ಒಮಾನ್ ತಂಡವು ನೆರವೇರಿಸಿಕೊಟ್ಟಿದೆ.


ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸೋಶಿಯಲ್ ಫೋರಮ್ ತಂಡವನ್ನು ನೆರವಿಗಾಗಿ ಸಂಪರ್ಕಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ಕಾರ್ಯಕರ್ತರ ತಂಡವು ಲಾಕ್ ಡೌನ್ ಸಂಚಾರ ನಿಯಮಾವಳಿ ಪ್ರಕಾರ ಸ್ಥಳಕ್ಕೆ ಧಾವಿಸಿ ಅಮರಾತ್ ನಲ್ಲಿ ಅಂತಿಮ ವಿಧಿವಿಧಾನವನ್ನು ನೆರವೇರಿಸಿತು.


ಮೃತ ನೂರುದ್ದೀನ್ ಅವರು ಸೂಪರ್ ಜನರಲ್ ಕೋ. ಎಲ್ ಎಲ್ ಸಿ ಕಂಪೆನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ಅನಾರೋಗ್ಯಪೀಡಿತರಾಗಿ ಕಳೆದ 21 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದಿನ ದಫನ ಕಾರ್ಯದಲ್ಲಿ ಕಾರ್ಯಕರ್ತರಾದ ಸುಹೈಲ್ ಆತೂರ್, ಅನ್ವರ್ ಕಾಪು, ಆಸಿಫ್ ಪಡುಬಿದ್ರೆ, ಫೈಝಲ್ ಕಲ್ಲಡ್ಕ, ಶಾಯಿಬಾನ್ ಜಲ್ಲಿಗುಡ್ಡೆ ಹಾಗೂ ರಫೀಕ್ ಸುಳ್ಯ ಮುಂತಾದವರು ಪಾಲ್ಗೊಂಡಿದ್ದರು.

Join Whatsapp
Exit mobile version