Home ಕರಾವಳಿ ಮುಸ್ಲಿಮ್ ದಂಪತಿಯ ತ್ರಿಬಲ್ ರೈಡಿನ ಕುರಿತು ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದ ಶಾಸಕ ವೇದವ್ಯಾಸ್ ಕಾಮತ್...

ಮುಸ್ಲಿಮ್ ದಂಪತಿಯ ತ್ರಿಬಲ್ ರೈಡಿನ ಕುರಿತು ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದ ಶಾಸಕ ವೇದವ್ಯಾಸ್ ಕಾಮತ್ ಕಾಲೆಳೆದ ಸಾಮಾಜಿಕ ಕಾರ್ಯಕರ್ತ !

►ಬೈಕಿನಲ್ಲಿ ಆರು ಜನ ಕೂರುವ ವೀಡಿಯೋ ಹಾಕಿ ಈಗೇನನ್ನುತ್ತೀರಿ ಎಂದು ಪ್ರಶ್ನೆ…

ಮಂಗಳೂರು: ಮುಸ್ಲಿಮ್ ದಂಪತಿಯ ನಗರದ ರಸ್ತೆಯೊಂದರಲ್ಲಿ ಒಂದೇ ಬೈಕ್ ನಲ್ಲಿ ಮೂವರು ತೆರಳುತ್ತಿರುವ ವೀಡಿಯೋವನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಒಂದೇ ಬೈಕಿನಲ್ಲಿ 6 ಜನ ಪ್ರಯಾಣಿಸುತ್ತಿದ್ದಾರೆ ಈಗ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕೆಸಿ ರೋಡ್ ತಿರುಗೇಟು ನೀಡಿದ್ದಾರೆ.

ಮುಸ್ಲಿಮ್ ಎಂಬ ಕಾರಣಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು, ಬೈಕ್ ನಲ್ಲಿ ತೆರಳುತ್ತಿರುವ ವೀಡಿಯೋವನ್ನು ತಮ್ಮ ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಶೇರ್ ಮಾಡಿ, ಮಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆದೇ ಈ ವೀಡಿಯೋದಲ್ಲಿ ಆರು ಮಂದಿ ಕೂತು ಪ್ರಯಾಣಿಸುತ್ತಿದ್ದಾರೆ ಇದಕ್ಕೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.


ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಈದ್ ಸಂದರ್ಭದಲ್ಲಿ ಮುಸ್ಲಿಂ ದಂಪತಿಗಳು ತಮ್ಮ ಮೂರು ಪುಟ್ಟ ಮಕ್ಕಳ ಜೊತೆ ಬೈಕ್ ನಲ್ಲಿ ಸಂಚರಿಸುವ ಫೋಟೋವೊಂದನ್ನು ಅಪ್ಲೋಡ್ ಮಾಡಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಈ ಒತ್ತಾಯದ ಹಿಂದೆ ಒಳ್ಳೆಯ ಉದ್ದೇಶ ಇರದೇ ಪೂರ್ವಾಗ್ರಹ ಮನಸ್ಥಿತಿ ಇದರ ಹಿಂದಿತ್ತು ಎನ್ನುವುದು ಸ್ಪಷ್ಟ. ಸಮಾಜ ಸೇವಕನ ಫೋಸ್ ಕೊಡುವ ಹನುಮಂತ ಕಾಮತ್ ಸಹ ಇದನ್ನು ತಮ್ಮ ತುಳುನಾಡು ನ್ಯೂಸ್ ನಲ್ಲೂ ಹಾಕಿ ತನ್ನ ಕೋಮುವಾದಿ ಮನಸ್ಥಿತಿಯಲ್ಲಿಯೇ ಸುದ್ದಿ ಮಾಡಿದ್ದರು. ಈ ಇಬ್ಬರು ಕಾಮತ್ ಧ್ವಯರು ಈಗ ಈ ಒಂದು ವಿಡಿಯೋವನ್ನು ನೋಡಿ ತಮ್ಮ ಅಭಿಪ್ರಾಯಗಳನ್ನು ಬರೆಯಬೇಕು ಎಂದು ಅಶ್ರಫ್ ಕೆಸಿ ರೋಡ್ ಒತ್ತಾಯಿಸಿದ್ದಾರೆ.

Join Whatsapp
Exit mobile version