Home ರಾಜ್ಯ ಹಾವು ಕಚ್ಚಿ ಯುವಕ ಸಾವು

ಹಾವು ಕಚ್ಚಿ ಯುವಕ ಸಾವು

ಧಾರವಾಡ: ಹಾವು ಕಚ್ಚಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಶ್ರಿರಾಮನಗರ ನಿವಾಸಿ ಚೇತನ್ (27) ಮೃತಪಟ್ಟ ಯುವಕ.

ವಿಷಪೂರಿತ ಹಾವೊಂದು ಶ್ರಿರಾಮನಗರದ ತುಳಜಾ ಭವಾನಿ ದೇವಸ್ಥಾನದ ಬಳಿ ಬಂದಿತ್ತು. ಅದನ್ನು ಹಿಡಿಯುವ ಸಲುವಾಗಿ ಚೇತನ್ ಅದರ ಸಮೀಪ ಹೋಗಿದ್ದಾರೆ. ಈ ವೇಳೆ ಅವರಿಗೆ ಹಾವು ಕಚ್ಚಿದೆ.

Join Whatsapp
Exit mobile version