ಕೇರಳ ಬಿಜೆಪಿ ರಾಜ್ಯಾಧ್ಯಕ್ಷರನ್ನು ತೆಗೆದುಹಾಕಲು ಪಕ್ಷದೊಳಗೆ ಸಹಿ ಸಂಗ್ರಹ

Prasthutha|

ತಿರುವನಂತಪುರಂ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರು ಸಹಿ ಸಂಗ್ರಹಿಸಿ ಹೈಕಮಾಂಡ್ ಗೆ ಕಳುಹಿಸಿದ್ದಾರೆ.

- Advertisement -

 ಕೇರಳ ಬಿಜೆಪಿ ನಾಯಕರಾದ ಪಿಕೆ ಕೃಷ್ಣದಾಸ್ ಮತ್ತು ಶೋಭಾ ಸುರೇಂದ್ರನ್ ನೇತೃತ್ವದ ಬಣ ಕೆ.ಸುರೇಂದ್ರನ್ ಅವರ ನೇತೃತ್ವದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಈ ಸಹಿ ಸಂಗ್ರಹ ಅಭಿಯಾನ ನಡೆಸಿದೆ ಎಂದು ಹೇಳಲಾಗಿದೆ.

ಕೇರಳ ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ವಿ ಮುರಳೀಧರನ್-ಕೆ.ಸುರೇಂದ್ರನ್ ಬಣವು ಆನ್‌ಲೈನ್ ಸಭೆಗಳನ್ನು ಆಯೋಜಿಸುವ ಮೂಲಕ ಪಕ್ಷವನ್ನು ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ಇನ್ನೊಂದು ಬಣ ನಾಯಕತ್ವದ ಬದಲಾವಣೆಗೆ ಒತ್ತಾಯಿಸುತ್ತಿದೆ. ಈ ಬಣವು ಕೆ.ಸುರೇಂದ್ರನ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿ ಪಕ್ಷದೊಳಗೆ ಸಹಿ ಸಂಗ್ರಹಿಸುತ್ತಿದೆ.

- Advertisement -

 ರಾಜೀನಾಮೆ ನೀಡಲು ಕೆ.ಸುರೇಂದ್ರನ್ ಸಿದ್ಧರಿಲ್ಲದಿದ್ದರೆ ಹೈಕಮಾಂಡ್ ರಾಜ್ಯ ಬಿಜೆಪಿಯ ನಾಯಕತ್ವವನ್ನು ಮರು ಸಂಘಟಿಸಬೇಕು ಎಂದು ಕೃಷ್ಣದಾಸ್-ಶೋಭಾ ಸುರೇಂದ್ರನ್ ಬಣವು ಒತ್ತಾಯಿಸಿದೆ.

Join Whatsapp