Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ನೀಡಿದ ಹಣ ಬಿಸಾಕಿ, ನಮಗೆ ನ್ಯಾಯ ಬೇಕು ಎಂದ ಮಹಿಳೆ!

ಸಿದ್ದರಾಮಯ್ಯ ನೀಡಿದ ಹಣ ಬಿಸಾಕಿ, ನಮಗೆ ನ್ಯಾಯ ಬೇಕು ಎಂದ ಮಹಿಳೆ!

ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರುನಲ್ಲಿ ಜುಲೈ 6 ರಂದು ನಡೆದ ಗುಂಪುಘರ್ಷಣೆ ನಂತರ ಡಾಬಾ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡ ಗುಂಪಿನವರನ್ನು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಕೆರೂರು ಘರ್ಷಣೆ ನಂತರ ಡಾಬಾ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡ ಕುಟುಂಬಸ್ಥ ಮಹಿಳೆಗೆ 2 ಲಕ್ಷ ರೂ. ನೀಡಿದರು.

ಈ ವೇಳೆ ಮಹಿಳೆ ನನಗೆ ಹಣ ಬೇಡ ಎಂದು ಸಿದ್ದರಾಮಯ್ಯ ನೀಡಿದ 2 ಲಕ್ಷ ರೂ ಹಣವನ್ನು ಕಾರು ಮೇಲೆ ರಾಜ್ಮಾ ಎನ್ನುವ ಮಹಿಳೆ ಬಿಸಾಕಿದ್ದಾರೆ.

ಈ ವೇಳೆ ಮಾತನಾಡಿದ ರಾಜ್ಮಾ, ನಾವು ಅಣ್ಣ ತಮ್ಮಂದಿರಂತೆ ಕೆರೂರುನಲ್ಲಿ ಬದುಕಿದ್ದೇವೆ. ನಮಗೆ ಪರಿಹಾರ ಬೇಡ. ನಮಗೆ ಶಾಂತಿ, ನ್ಯಾಯ ಬೇಕು. ನಮಗೆ ಹಸಿವಾದರೆ ಹಿಂದೂ ಆದ್ರೂ ಆಗಲಿ ಮುಸ್ಲಿಂ ಆದ್ರೂ ಆಗಲಿ ಒಂದು ರೊಟ್ಟಿ ನೀಡುತ್ತಾರೆ ಎಂದು ಹೇಳಿದರು.

Join Whatsapp
Exit mobile version