ಈಶ್ವರಪ್ಪ ಪೆದ್ದ, ಅವರ ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲ: ಸಿದ್ದರಾಮಯ್ಯ

Prasthutha|

ಕೊಪ್ಪಳ: ಈಶ್ವರಪ್ಪ ಪೆದ್ದ, ಅವನ ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ಎಷ್ಟು ಹಣ ತಗೊಂಡಿದ್ದಾರೋ ಎಂಬ ಈಶ್ವರಪ್ಪ ಅವ್ರ ಹೇಳಿಕೆಗೆ ಕೊಪ್ಪಳದಲ್ಲಿ ಪ್ರತಿಕ್ರಿಸಿದ ಮಾಜಿ ಮುಖ್ಯಮಂತ್ರಿ, ‘ನಾನು ಹೇಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎಂದು ಗೊತ್ತಾ ನಿಮಗೆ? ಈಶ್ವರಪ್ಪ ಪೆದ್ದ, ಅವನಿಗೆ ಬ್ರೇನ್ಗೂ ನಾಲಿಗೆಗೂ ಲಿಂಕ್ ಇಲ್ಲ. ಬಾಯಿಗೆ ಬಂದಂತೆ ಮಾತಾಡ್ತಾನೆ. ನನ್ನ ಜೆ.ಡಿ.ಎಸ್ʼನಿಂದ ದೇವೇಗೌಡರು ಹೊರಹಾಕಿದ್ರು. ನಾನು ಉಪ ಮುಖ್ಯಮಂತ್ರಿ ಆಗಿದ್ದಾಗ ವಜಾ ಮಾಡಿದ್ರು. ಆಗಲೇ ಓಡಿಹೋಗಿ ಕಾಂಗ್ರೆಸ್ ಸೇರಲಿಲ್ಲ. ಒಂದು ವರ್ಷ ಅಹಿಂದ ಸಂಘಟನೆ ಮಾಡಿದೆ. ಆಮೇಲೆ ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ನನಗೆ ಅಹ್ವಾನ ನೀಡಿದ್ರು. ಬಿಜೆಪಿ ವಿರುದ್ದ ಹೋರಾಟಕ್ಕೆ ನಾನು ಕಾಂಗ್ರೆಸ್ ಸೇರಿದೆ. ಪ್ರತಾಪ್ಗೌಡ ಪಾಟೀಲ್ ಬಿಜೆಪಿ ಸೇರಿದ್ದಕ್ಕೂ ನನಗೂ ವ್ಯತ್ಯಾಸ ಗೊತ್ತಾಯ್ತಾ ನಿಮಗೆ? ಈಶ್ವರಪ್ಪಗೆ ಇದ್ಯಾವುದೂ ಗೊತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

Join Whatsapp