Home ಟಾಪ್ ಸುದ್ದಿಗಳು ಸಿದ್ದರಾಮಯ್ಯಗೆ ಈಗ ಮೊದಲಿದ್ದಷ್ಟು ಸ್ವಾತಂತ್ರ್ಯ ಇಲ್ಲ: ಹೆಚ್‌. ಆಂಜನೇಯ

ಸಿದ್ದರಾಮಯ್ಯಗೆ ಈಗ ಮೊದಲಿದ್ದಷ್ಟು ಸ್ವಾತಂತ್ರ್ಯ ಇಲ್ಲ: ಹೆಚ್‌. ಆಂಜನೇಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಮುಖ್ಯಂತ್ರಿಯಾದಾಗ ಇದ್ದ ಹಾಗಿಲ್ಲ, ಎಲ್ಲೋ ಅವರಿಗೆ ಒತ್ತಡ ಬೀಳ್ತಾ ಇದೆ ಎಂದು ಜನಸಾಮನ್ಯರು ಅಂದುಕೊಳ್ಳುತ್ತಿರುವಾಗಲೇ “ಇದೇ ನಿಜ” ಎಂಬಂತೆ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಹೆಚ್. ಆಂಜನೇಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ 2013-18ರ ಅವಧಿ ಸುವರ್ಣಯುಗವಾಗಿತ್ತು. ಅವಾಗಿನ ಸ್ವಾತಂತ್ರ್ಯ ಈಗ ಇದ್ದಂತಿಲ್ಲ ಎಂದು ಆಂಜನೇಯ ಹೇಳಿದ್ದಾರೆ.

ನಗರದಲ್ಲಿ ನಡೆದ ಗವಿಮಾರ್ಗ ಪುಸ್ತಕ ಬಿಡುಗಡೆ, ವಿ.ಪಿ. ಸಿಂಗ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ‘ಮಂಡಲ್‌ ವರದಿ ಆಗಿದ್ದೇನು?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಆ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಂದ ಕ್ರಾಂತಿಕಾರಕ ಕೆಲಸಗಳು ಆಗಿದ್ದವು. ಹಿಂದಿನ ದಿನ ಚರ್ಚೆಯಾದರೆ, ಮರುದಿನವೇ ಜಾರಿಯಾಗುತ್ತಿತ್ತು. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಬಾರಿ ಅಂಥ ಸ್ವಾತಂತ್ರ್ಯ ಮುಖ್ಯಮಂತ್ರಿಯವರಿಗೆ ಇಲ್ಲ ಎಂದನ್ನಿಸುತ್ತಿದೆ. ಶಾಸಕರ ಒತ್ತಡವೂ ಸೇರಿದಂತೆ ಬೇರೆ ಬೇರೆ ವಿಚಾರಗಳು ಇದಕ್ಕೆ ಕಾರಣ ಇರಬೇಕು. ಆದರೆ ಯಾವುದೇ ಒತ್ತಡವಿದ್ದರೂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯವನ್ನು ಬಿಡುವವರಲ್ಲ ಎಂದು ಆಂಜನೇಯ ಹೇಳಿದರು.

ಕಾಂತಾರಾಜ ಜನಗಣತಿ ವರದಿಯನ್ನು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಸಿದ್ಧಪಡಿಸಲಾಗಿದೆ. ಆ ಜಾತಿಯವರನ್ನು ಹೆಚ್ಚು ಸೇರಿಸಿದ್ದಾರೆ, ಈ ಜಾತಿಯವರನ್ನು ಕಡಿಮೆ ಮಾಡಿದ್ದಾರೆ ಎಂದೆಲ್ಲ ಸುಳ್ಳು ಸುದ್ದಿಯನ್ನೇ ಹರಡಿ ವರದಿ ಸ್ವೀಕರಿಸಲೂ ಬಿಟ್ಟಿಲ್ಲ. ಕಾಂತರಾಜ ವರದಿಯಂತೆ ಸದಾಶಿವ ಆಯೋಗದ ವರದಿಯೂ 12 ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಎಂದು ಆಂಜನೇಯ ವಿಷಾದಿಸಿದರು.

Join Whatsapp
Exit mobile version