Home ಕರಾವಳಿ ಹಿರಿಯಡ್ಕ ಠಾಣೆಯಲ್ಲಿ ರೌಡಿ ಶೀಟರ್ ಗಳಿಂದಲೇ ಪೊಲೀಸ್ ಅಧಿಕಾರಿಗೆ ಸನ್ಮಾನ !

ಹಿರಿಯಡ್ಕ ಠಾಣೆಯಲ್ಲಿ ರೌಡಿ ಶೀಟರ್ ಗಳಿಂದಲೇ ಪೊಲೀಸ್ ಅಧಿಕಾರಿಗೆ ಸನ್ಮಾನ !

ದನದ ವ್ಯಾಪಾರಿ ಹುಸೈನಬ್ಬ ಜೋಕಟ್ಟೆ ಕೊಲೆ ಆರೋಪಿಗಳು

ದನದ ವ್ಯಾಪಾರಿ ಹುಸೇನ್ ಜೋಕಟ್ಟೆ  ಕೊಲೆ ಪ್ರಕರಣದ ಆರೋಪಿಗಳಿಂದ ಉಡುಪಿಯ ಹಿರಿಯಡ್ಕ ಠಾಣಾ ಎಸ್ಐ ಸನ್ಮಾನಿಸಲ್ಪಟ್ಟ ಘಟನೆ ನಡೆದಿದೆ. ಆರೋಪಿಗಳಾಗಿರುವ  ಪ್ರಸಾದ್ ಕೊಂಡಾಡಿ ಹಾಗೂ ಉಮೇಶ್ ಶೆಟ್ಟಿ ಎನ್ನುವವರಿಂದ ಎಸ್ಐ ಹಿರಣ್ಣ ಸನ್ಮಾನ ಮಾಡಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೆ ಹಿಂದೂ ಜಾಗರಣ ವೇದಿಕೆವತಿಯಿಂದ ಹಿರಿಯಡ್ಕ ಠಾಣೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಝರ್ ವಿತರಣೆ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ  ಕೋವಿಡ್ ನಿಯಾಮಳಿಗಳನ್ನೂ ಗಾಳಿಗೆ ತೂರಿ ರೌಡಿಶೀಟರ್ ಗಳಿಂದಲೇ ಎಸ್ಐ ಒಬ್ಬರು ಸನ್ಮಾನಿಸಲ್ಪಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಎರಡು ವರ್ಷಗಳ ಹಿಂದೆ  ದನದ ವ್ಯಾಪಾರಿಯಾಗಿದ್ದ ಹುಸೇನ್ ಜೋಕಟ್ಟೆ ಅವರನ್ನು ಹಿರಿಯಡ್ಕಾ ಠಾಣಾ ವ್ಯಾಪ್ತಿಯಲ್ಲಿ ತಂಡವೊಂದು ತಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ನಡೆಸಿತ್ತು. ಈ  ಕೊಲೆ ಪ್ರಕರಣಕ್ಕೆ ಸಂಬಂಧಿಸಿ  8 ಮಂದಿ ಭಜರಂಗದಳದ ಸದಸ್ಯರು ಮತ್ತು ಕರ್ತವ್ಯ ಲೋಪವೆಸಗಿದ 3 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು.  ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸ್ ಅಧಿಕಾರಿಯನ್ನೇ ಸನ್ಮಾನಿಸಿದ್ದು,  ಇವರೀರ್ವರೂ ಅದೇ ಠಾಣೆಯಲ್ಲಿ ರೌಡಿ ಶೀಟರ್ ಗಳು ಎನ್ನುವುದು ಮಹತ್ವದ ಅಂಶವಾಗಿದೆ.

Join Whatsapp
Exit mobile version