ಮೋದಿ ಹೇಳಿದ್ದನ್ನೆಲ್ಲ ಹಿಂದುಗಳು ಕೇಳಬೇಕಾ?: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಸಂಸತ್‌ನಲ್ಲಿ ನೀಡಿದ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಾಯಕರು ಪ್ರತಿಭಟಿಸುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಪ್ರಧಾನಿ ಮೋದಿ ಹೇಳಿದ್ದನ್ನೆಲ್ಲ ಹಿಂದುಗಳು ಕೇಳಬೇಕಾ, ಹಿಂದಿನಿಂದಲೂ ಹಿಂದೂ ಧರ್ಮ ಉಳಿದಿಲ್ವಾ? ಬೆಳೆದಿಲ್ವಾ ಎಂದು ಕೇಳಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಬಿಜೆಪಿಗೆ ಇದೇ ಚಾಳಿ. ಹಿಂದೂಗಳಿಂದ ಹಿಂಸಾಚಾರ ನಡೆಯಲು ಬಿಡಲ್ಲ ಅಂತ ಹೇಳಿದ್ದಾರೆ. ಅಹಮ್ಮದಾಬಾದ್‌ನಲ್ಲಿ ಹತ್ಯೆಯಾಗಿರುವುದಕ್ಕೆ ಏನು ಹೇಳ್ತಾರೆ ಬಿಜೆಪಿಗರಿಗೆ ತಿರುಗೇಟು ನೀಡಿದರು.

ಬಿಜೆಪಿಗರು ಹತ್ತುವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಅಲ್ವಾ ಇವರಿಗೆ ಲೋಕಸಭೆಯಲ್ಲಿ ಬಹುಮತ ಬಂದಿಲ್ಲ. ನರೇಂದ್ರ ಮೋದಿ ಒಬ್ಬ ಸುಳ್ಳಿನ‌ ಸರದಾರ. ಬಿಜೆಪಿ ಐಟಿ ಸೆಲ್ ಸುಳ್ಳಿನ‌ ಕಾರ್ಖಾನೆ. ರಾಹುಲ್ ಗಾಂಧಿ ಕೊಟ್ಟಿರುವ ಹಿಂದೂ ವಿರೋಧಿ ಸ್ಟೇಟ್‌ಮೆಂಟ್ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

- Advertisement -

ಮೋದಿ ಹೇಳಿದನ್ನೆಲ್ಲಾ ಹಿಂದೂಗಳು ಕೇಳಬೇಕಾ?

ಮಣಿಪುರ ವಿಚಾರ, ನೀಟ್ ಸ್ಕ್ಯಾಮ್, ಪ್ರಜ್ವಲ್ – ಸೂರಜ್ ಪ್ರಕರಣಗಳ ಬಗ್ಗೆ ಯಾಕೆ ಇವರು ಮಾತನಾಡ್ತಿಲ್ಲ? ಅದನ್ನೆಲ್ಲ ಮರೆಮಾಚಲು ಬೇಕಾಗಿ ಈ ರೀತಿ ತಂದಿಡುವುದು. ಸಂಸತ್‌ನಲ್ಲಿ ರಾಹುಲ್ ಗಾಂಧಿ ಮಾತು ರೆಕಾರ್ಡ್ ಆಗಿದೆಯಲ್ವಾ? ಮೋದಿ ಮಂಗಳವಾರ ಎರಡೂವರೆ ತಾಸು ಭಾಷಣ ಮಾಡಿದ್ದಾರೆ. ನಿರುದ್ಯೋಗ, ಆರ್ಥಿಕ ಅಸಮಾನತೆ, ಸಂವಿಧಾನ ರಕ್ಷಣೆ ಇದರ ಬಗ್ಗೆ ಮಾತನಾಡಿದ್ದಾರಾ ಹೀಗೆ ಬಿಜೆಪಿಗರಿಗೆ ಸರಣಿ ಪ್ರಶ್ನೆಗಳನ್ನು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

Join Whatsapp
Exit mobile version