Home ರಾಜ್ಯ ಶಿರೂರು ಗುಡ್ಡ ಕುಸಿತ ಪ್ರಕರಣ: ಮಗನಿಗಾಗಿ ಆಟಿಕೆ ಖರೀದಿಸಿದ್ದ ಮೃತ ಅರ್ಜುನ್..!

ಶಿರೂರು ಗುಡ್ಡ ಕುಸಿತ ಪ್ರಕರಣ: ಮಗನಿಗಾಗಿ ಆಟಿಕೆ ಖರೀದಿಸಿದ್ದ ಮೃತ ಅರ್ಜುನ್..!

ಕಾರವಾರ: ಅಂಕೋಲದ ಶಿರೂರಿನಲ್ಲಿ ಭೂ ಕುಸಿತ ಸಂಭವಿಸಿ 11 ಜನ ಮೃತಪಟ್ಟಿದ್ದಾರೆ.

ಮೂರನೇ ಹಂತದ ಸುದೀರ್ಘ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಮೃತದೇಹ ಭಾರತ್ ಬೇಂಜ್ ಲಾರಿಯಲ್ಲೇ ಸಿಕ್ಕಿದ್ದು, ಇದೀಗ ಲಾರಿ ಅವಶೇಷದಡಿ ಅರ್ಜುನ್ ತನ್ನ ಮಗುವಿಗಾಗಿ ಖರೀದಿಸಿದ್ದ ಲಾರಿಯ ಅಟಿಕೆ, ಮೊಬೈಲ್‌ ಗಳು ದೊರೆತಿವೆ.

ಸದ್ಯ ಅರ್ಜುನ್ ಕೊಳತ ಸ್ಥಿತಿಯ ದೇಹವನ್ನು ಅಂಕೋಲದ ಶವಾಗಾರದಲ್ಲಿ ಇರಿಸಲಾಗಿದೆ. ಜೊತೆಗೆ ಡಿಎನ್‌ ಎ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಿದ್ದಾರೆ‌.

ಗಂಗಾವಳಿ ನದಿಯಲ್ಲಿ ತೆಗೆದ ನಜ್ಜುಗುಜ್ಜಾದ ಲಾರಿಯಲ್ಲಿ ಅರ್ಜುನ್‌ ಗೆ ಸೇರಿದ ಎರಡು ಮೊಬೈಲ್, ಪಾತ್ರೆಗಳು, ಲಾರಿ ಮಾದರಿಯ ಆಟಿಕೆ ದೊರೆತಿದೆ. ಅವುಗಳನ್ನು ಅರ್ಜುನ್ ಸಹೋದರ ಅಭಿಜಿತ್‌ ಗೆ ನೀಡಲಾಗಿದೆ.

Join Whatsapp
Exit mobile version