Home ಟಾಪ್ ಸುದ್ದಿಗಳು ಶಿವಮೊಗ್ಗ | ಇಬ್ಬರ ಕೊಲೆ: ಆರೋಪಿ ಬಂಧನ

ಶಿವಮೊಗ್ಗ | ಇಬ್ಬರ ಕೊಲೆ: ಆರೋಪಿ ಬಂಧನ

ತೀರ್ಥಹಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಕೂಲಿ ಕಾರ್ಮಿಕರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ದಾವಣಗೆರೆ ನಗರದ ಬೀರೇಶ್ (35) ಮತ್ತು ಮಂಜುನಾಥ್ (46) ಕೊಲೆಯಾದವರು. ಕೊಲೆ ಆರೋಪಿ ರಾಜಣ್ಣನನ್ನು (58) ಬಂಧಿಸಲಾಗಿದೆ.


ಸಮುದಾಯ ಭವನದ ಟೈಲ್ಸ್ ಜೋಡಣೆ ಕೆಲಸಕ್ಕಾಗಿ ದಾವಣಗೆರೆಯಿಂದ 12 ದಿನಗಳ ಹಿಂದೆ 5 ಜನರು ಬಂದಿದ್ದರು. ರಾಜಣ್ಣ ಎಲ್ಲ ಕೂಲಿ ಕೆಲಸಗಾರರಿಗೆ ಅಡುಗೆ ಮಾಡಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಕಾರ್ಮಿಕರಿಗೆ ಇಡ್ಲಿ ಕೊಟ್ಟಿದ್ದರು. ರಾತ್ರಿಯೂ ಅದನ್ನೇ ತಿನ್ನಲು ರಾಜಣ್ಣ ಹೇಳಿದ್ದಾರೆ. ಇದೇ ವಿಚಾರಕ್ಕೆ ಇವರ ಮಧ್ಯೆ ಗಲಾಟೆಯಾಗಿದ್ದು ರಾಜಣ್ಣನನ್ನು ಮಂಜುನಾಥ್ ಮತ್ತು ಬೀರೇಶ್ ಎಳೆದಾಡಿ ಹೊಡೆದಿದ್ದಾರೆ.


ಇದರಿಂದ ಕೋಪಗೊಂಡ ರಾಜಣ್ಣ ರಾತ್ರಿ ಊಟ ಮುಗಿಸಿ ಟೆರೆಸ್ ಮೇಲೆ ಮಲಗಿದ್ದ ಮಂಜುನಾಥ್, ಕಟ್ಟಡದ ಒಳಗೆ ಮಲಗಿದ್ದ ಬೀರೇಶ್ ಮೇಲೆ ಪಿಕಾಸಿಯಿಂದ ತಲೆಗೆ ಹೊಡೆದಿದ್ದಾರೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Join Whatsapp
Exit mobile version